ಎಸ್‌ಐಆರ್ ಗೆ 2026 ಸಂಪೂರ್ಣ ಸಹಕಾರ ನೀಡಿ: ಶಾಸಕ ಡಾ. ಚಂದ್ರು ಲಮಾಣಿ ಕರೆ

ಎಸ್‌ಐಆರ್ ಗೆ 2026 ಸಂಪೂರ್ಣ ಸಹಕಾರ ನೀಡಿ: ಶಾಸಕ ಡಾ. ಚಂದ್ರು ಲಮಾಣಿ ಕರೆ Extend full cooperation to SIR 2026: MLA Dr. Chandru Lamani urges

ಲಕ್ಷ್ಮೇಶ್ವರ, ಜು. 6: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದ ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರು, ಮತದಾರರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.  ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು, ವಿಳಾಸ ಹಾಗೂ ಇತರೆ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರೀಶೀಲಿಸಬೇಕು ಎಂದು ಹೇಳಿದರು. ಮನೆಗಳಿಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ, ಹೆಸರು ಸೇರೆ​‍್ಡ, ತಿದ್ದುಪಡಿ ಅಥವಾ ಸ್ಥಳಾಂತರದಂತಹ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.  

ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಅಮೂಲ್ಯ ಹಕ್ಕಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸರಿಯಾಗಿರುವುದು ಅತ್ಯಗತ್ಯ. ಆದ್ದರಿಂದ ಎಲ್ಲರೂ  ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಗದಗ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಡಿ. ವೈ. ಹುನಗುಂದ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ ಬಿದರಹಳ್ಳಿ, ಅಶೋಕ್ ಶಿರಹಟ್ಟಿ, ಗಂಗಾಧರ ಮೆಣಸಿನಕಾಯಿ, ಸಂಜು ದೇಶಾಯಿ, ಶಂಕರ ಮಾಳಗಿ, ಹುಚ್ಚಪ್ಪ ಹುಗಾರ, ಮಹಾಂತೇಶ ತಳವಾರ, ಸಿದ್ದು ಬಿಜೂರಮಠ, ಶಂಭು ಹುನಗುಂದ, ಹಿರಿಯ ಮುಖಂಡರು, ವಾರ್ಡ್‌ ಸದಸ್ಯರು ಹಾಗೂ ಬಿಎಲ್‌ಒ ವಿಶಾಲಾಕ್ಷಿ ಮಲ್ಲಾಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು.