ರಾಣೇಬೆನ್ನೂರಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಆರಂಭ
ರಾಣೇಬೆನ್ನೂರು13: ಸಂಚಾರಿ ಹಾಗೂ ನಗರಠಾಣಾ ವತಿಯಿಂದ ನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಸಾವಿರಾರು ವಿದ್ಯಾರ್ಥಿ ಗಳೊಂದಿಗೆ ಸಂಚರಿಸಿ ರಸ್ತೆ ಸಂಚಾರ ನಿಯಮ ಜಾಗೃತಿ ಕುರಿತಂತೆ ಜನಜಾಗೃತಿಗೊಳಿಸುವಲ್ಲಿ ಬೃಹತ್ ಜಾಥಾ ಮೆರವಣಿಗೆಯು ಯಶಸ್ವಿ ಕಂಡಿತು. ಸಂಚಾರಿ ಠಾಣಾ ಸಭಾಂಗಣದಿಂದ ಹೊರಟ ವಿದ್ಯಾರ್ಥಿ ಸಮುದಾಯದ ಮೆರವಣಿಗೆಯು ಕುರುಬಗೇರಿ, ದುರ್ಗಾ ಸರ್ಕಲ್, ಗೌಳಿ ಗಲ್ಲಿ, ಮಹಾವೀರ ಗಲ್ಲಿ, ಸಂಗಮ್ ವೃತ್ತ, ಪ್ರಧಾನ ಅಂಚೆಕಛೇರಿ ಮತ್ತು ಎಂ.ಜಿ.ರಸ್ತೆ ಮೂಲಕ ಸಾಗಿ ಬಸ್ಟ್ಯಾಂಡ್ ಬಳಿ ಸಾಂಗತ್ಯಗೊಂಡಿತು. ಜಾಗೃತಿ ಜಾಥಾದಲ್ಲಿ ಬಿಎಜೆಎಸ್ಎಸ್ ಕಾಲೇಜು, ರಾಜ-ರಾಜೇಶ್ವರಿ, ಎಚ್.ಎಸ್.ಪಿ.ಯು ಕಾಲೇಜು, ದೇವಿಕಾ ಕಾಲೇಜು ಸೇರಿದಂತೆ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಸಿಪಿಐ ಲಿಂಗನಗೌಡ ನೆಗಳೂರ, ಸಂಚಾರಿ ಪಿಎಸ್ಐ ಎನ್ಎಸ್ ಉದಗಟ್ಟಿ, ಸಹದೇವಪ್ಪ ಚೌಟಗಿ ಸೇರಿದಂತೆ ಪೋಲೀಸ್ ಇಲಾಖೆಯ ಅನೇಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 