ಗೃಹ ಸಚಿವರಿಂದ ವಿಶೇಷ ರೀತಿಯ ದಸರಾ
ನವದೆಹಲಿ 14: ಕೇಂದ್ರ ಗೃಹ ಸಚಿವ ರಾಜನಾಥ್
ಸಿಂಗ್ ಈ ಬಾರಿ ದಸರಾ
ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಿದ್ದಾರೆ. ಭಾರತ-ಪಾಕಿಸ್ತಾನ ಅತ್ಯಂತ
ಸೂಕ್ಷ್ಮ ಗಡಿ ಪ್ರದೇಶದಲ್ಲಿ ಶಸ್ತ್ರಪೂಜೆಯನ್ನುಸಿಂಗ್
ನೆರವೇರಿಸಲಿದ್ದಾರೆ.
ಭಾರತದೊಂದಿಗೆ ಈ ಹಿಂದೆ ಪೂರ್ಣ
ಪ್ರಮಾಣದ ಯುದ್ಧ ನಡೆಸಿ ಈಗಲೂ ಪಾಕಿಸ್ತಾನ ಕಾಲು
ಕೆರೆದುಕೊಂಡು ಕ್ಯಾತೆ ತೆಗೆಯುತ್ತಿರುವ ಅತ್ಯಂತ ಸೂಕ್ಷ್ಮ ಸ್ಥಳದಲ್ಲೇ ಗೃಹ ಸಚಿವರು ಶಸ್ತ್ರ
ಪೂಜೆ ನೆರವೇರಿಸಲು ಸಜ್ಜಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ (ಕುರುಳಿನ ಕರೆ ಚಿತ್ರದಲ್ಲಿನ ಮೈಸೂರು
ದಸರಾ ಎಷ್ಟೊಂದು ಸುಂದರ ಎಂಬ ಜನಪ್ರಿಯ ಗೀತೆಯ
ಶತ್ರುವ ಅಳಿಸಲು ಶಸ್ತ್ರವ ಹೂಡಿ ಎಂಬ ಆಯುಧಪೂಜೆ
ಹಾಡಿನ ಸಾಲನ್ನು ನೆನೆಪಿಸುತ್ತದೆ).
ರಾಜಸ್ತಾನದ ಭಾರತ-ಪಾಕಿಸ್ತಾನ ಗಡಿಯ
ಬಿಕನೇರ್ನಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋದರೊಂದಿಗೆ ಗೃಹ ಸಚಿವರು ಅ.19ರಂದು ದಸರಾ ಆಚರಿಸಲಿದ್ದಾರೆ
ಎಂದು ಗೃಹ ಸಚಿವಾಲಯದ ಹಿರಿಯ
ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಡಿ ಪ್ರದೇಶದ ಮುಂಚೂಣಿ
ನೆಲೆಯಲ್ಲಿನ ಬಾರ್ಡರ್ ಔಟ್ ಪೋಸ್ಟ್ (ಬಿಪಿಒ)ನಲ್ಲಿ ಶಸ್ತ್ರ ಪೂಜೆಯನ್ನೂ ಸಹ ಸಿಂಗ್ ನೆರವೇರಿಸುವರು.
ಕೇಂದ್ರದ ಸಚಿವರೊಬ್ಬರು ಇಂಡೋ-ಪಾಕ್ ಗಡಿಯಲ್ಲಿ
ಇಂಥ ಪೂಜೆ ನೆರವೇರಿಸಿ ದಸರಾವನ್ನು
ವಿಶಿಷ್ಟವಾಗಿ ಆಚರಿಸಲು ಮುಂದಾಗಿರುವುದು ಇದೇ ಮೊದಲು.
ದಶಕಂಠ ರಾವಣನ ವಿರುದ್ಧ ರಾಮನ ವಿಜಯೋತ್ಸವದ ಸಂಭ್ರಮಾಚರಣೆಯೂ
ದಸರಾದ ಒಂದು ಭಾಗವಾಗಿದೆ. ದಸರಾ
ಸಂದರ್ಭದಲ್ಲಿ ಅದರಲ್ಲೂ ಗಡಿ ಪ್ರದೇಶದಲ್ಲಿ ರಾಜನಾಥ್
ಸಿಂಗ್ ಅವರು ಶಸ್ತ್ರಪೂಜೆಯು ಶತ್ರುವ
ಅಳಿಸಲು ಶಸ್ತ್ರವ ಹೂಡಿ ಎಂಬ ಆಯುಧಪೂಜೆ
ಹಾಡಿನ ಸಾಲಿನಂತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 