ಸಮಾಜ ಸೇವಕ ಶಿವಾನಂದ ಬಡ್ಡಿಮನಿ ಅವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ

ಸಮಾಜ ಸೇವಕ ಶಿವಾನಂದ ಬಡ್ಡಿಮನಿ ಅವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ Social worker Shivananda Baddimani's birthday celebrated with great enthusiasm

ಬೈಲಹೊಂಗಲ 17 : ನಗರದ  ನಿವಾಸಿ, ಸಮಾಜಸೇವಕರು, ಬಸವ ಚಿಟ್ಸ (ರಿ) ಅಧ್ಯಕ್ಷರಾದ ಶಿವಾನಂದ ಬಡ್ಡಿಮನಿ ಅವರ ಹುಟ್ಟುಹಬ್ಬವನ್ನು ಗಣ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. 

ಈ ವಿಶೇಷ ದಿನದಂದು ಸ್ಥಳೀಯ ಗಣ್ಯರು, ಸ್ನೇಹಿತರು ಮತ್ತು ಸಾರ್ವಜನಿಕರು ಶಿವಾನಂದ. ಬಡ್ಡಿಮನಿ ಅವರಿಗೆ ಹೂಗುಚ್ಚ ನೀಡಿ, ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಈ ಸಂದರ್ಭದಲ್ಲಿ ಮಾತನಾಡಿದ  ಅವರು, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿಗಳಾದ ವಿಜಯ ಮೆಟಗುಡ್ಡ ಅವರ ನೇತೃತ್ವದಲ್ಲಿ  ಜನರ ಸಮಸ್ಯೆ,  ಕಷ್ಟಗಳಿಗೆ ಸ್ಪಂದಿಸುವ ಮತ್ತು ಸಮಾಜಸೇವೆ ಮಾಡುತ್ತಿದ್ದೇನೆ. ಮುಂದೆಯೂ ಸಮಾಜಮುಖಿ ಕಾರ್ಯಗಳನ್ನು ಶಿರಸಾವಹಿಸಿ ಮಾಡುತ್ತೇನೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ  ವೀರಶೈವ ಲಿಂಗಾಯತ ಮಹಾಸಭಾ ನಿರ್ದೆಶಕರಾದ ಗುರು ಮೆಟಗುಡ್ಡ, ದಯಾನಂದ ಪರಾಳಶೆಟ್ಟರ್, ಕಲಾವಿದರಾದ ಮಹಾಂತೇಶ ಮುದಕನಗೌಡರ, ಸಾಹಿತಿ ಸಿ.ವಾಯ್‌.ಮೆಣಸಿನಕಾಯಿ,  ಪತ್ರಕರ್ತ ಅಪ್ಪಯ್ಯ ಕಮ್ಮಾರ, ಬಸವರಾಜ ಕಾರಾಂವಿ, ಹಿರಿಯರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಶುಭಹಾರೈಸಿದರು