ಸಿಂದಗಿ: ಪಯಣ ಕನ್ನಡ ಚಲನಚಿತ್ರ ಬಿಡುಗಡೆ
ಲೋಕದರ್ಶನ ವರದಿ
ಸಿಂದಗಿ 27: ಚಿತ್ರರಂಗ ಕ್ಷೇತ್ರದಲ್ಲಿ ಉತ್ತರ ಕರ್ನಾಕದ ಕಲಾವಿಧರಿಗೆ ಅವಕಾಶಗಳು ಕಡಿಮೆ ಎಂದು ಸಿಂದಗಿಯ ಭಾಗ್ಯರಾಜ್ ಕಂಭೈನ್ಸ್ ಚಿತ್ರ ಸಂಸ್ಥೆಯ ನಿರ್ಮಾಪಕ ಭಾಗಪ್ಪ ಶಂಭೇವಾಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಕಲಾವಿದರ ತವರಾಗಿದೆ. ಈ ತವರು ನೆಲದಿಂದ ನಿರ್ಮಿತವಾದ ಪಯಣ ಕನ್ನಡ ಚಲನಚಿತ್ರ ಸ.27 ರಂದು ರಾಜ್ಯಾಧ್ಯಂತ ಬಿಡುಗಡೆ
ತಾರಾಗಣದಲ್ಲಿ ನಾನು ರೈತನ ಪಾತ್ರದಲ್ಲಿ ನಟಿಸಿರುವೆನು. ಹಿರಿಯ ನಟಿ ಭವ್ಯಾ, ಜೊ ಸೈಮನ್, ಶಂಕರ, ಅಂಜನಪ್ಪ, ಸುಧಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಚಿತ್ರವು ಕೊಲ್ಕತ್ತಾದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೋಳ್ಳಲಿದೆ ಎಂದು ಹೇಳಿದರು.
ಪಯಣ ಚಲನಚಿತ್ರ ಬಿಡುಗಡೆ ಮಾಡಲು ಸಾಕಷ್ಟು ತೊಂದರೆಗಳು ಕಂಡು ಬಂದವು. ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಒಂದು ಚಿತ್ರಮಂದಿರಗಳು ಸಿಗಲಿಲ್ಲ. ಆದರೆ ಸ್ಥಳಿಯ ಆನಂದ ಚಿತ್ರ ಮಂದಿರದ ಮಾಲಿಕರಾದ ಅಶೋಕ ಮನಗೂಳಿ ಅವರು ತಮ್ಮ ಚಿತ್ರಮಂದಿರದಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶನೀಡಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದಲ್ಲಿರುವ ಚಲನಚಿತ್ರ ಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಚಿತ್ರ ಮಂದಿರಗಳ ಮಾಲಿಕರ ಮನವಲಿಸಿದ್ದಾರೆ. ಕಲಾಭಿಮಾನಿಗಳು ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 