ಸಿಂದಗಿ: ತಾಳ್ಮೆಯಿಂದ ಬಿತ್ತನೆ ಬೀಜ ಪಡೆಯಲು ಕರೆ
ಲೋಕದರ್ಶನ ವರದಿ
ಸಿಂದಗಿ 26: ರೈತರು ತಾಳ್ಮೆಯಿಂದ ಸರದಿಯಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬೇಕು ಎಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.
ಬುಧವಾರ ಪಟ್ಟಣದ ಸಿಂದಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಗರಿ ಬೀಜ ವಿತರಿಸಿ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಸರದಿಯಲ್ಲಿ ನಿಂತು ಬೀಜ ಪಡೆದರೆ ಎಲ್ಲರಿಗೂ ಸಿಗುತ್ತವೆ. ಒಂದು ವೇಳೆ ತೊಗರಿ ಬೀಜ ಕಡಿಮೆ ಬಿದ್ದಲ್ಲಿ ಮತ್ತೆ ದಾಸ್ತಾನು ತರಿಸಲಾಗುವುದು. ರೈತರು ಆತಂಕ ಪಡಬೇಕಾಗಿಲ್ಲ. ಒಂದು ಖಾತೆದಾರರಿಗೆ 5 ಪಾಕೀಟ ತೊಗರಿ ಬೀಜವನ್ನು ನೀಡಲಾಗುವುದು. ಬಿತ್ತನೆ ಬೀಜಗಳನ್ನು ಪಡೆಯುವಾಗ ಸಂಭಂದಿಸಿದ ಖಾತೇದಾರರ ಆಧಾರ ಕಾರ್ಡ, ಪಾಣಿ ಉತಾರಿ, ಖಾತೆ ಉತಾರಿ ಪ್ರತಿಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಡಾ.ಎಚ್.ವಾಯ್.ಸಿಂಗೆಗೋಳ, ಕೃಷಿ ಅಧಿಕಾರಿಗಳಾದ ಎ.ಎಸ್.ಹುಣಶ್ಯಾಳ, ಸೀತಿಮನಿ ಅವರು ರೈತರ ಕುರಿತು ಮಾತನಾಡಿದರು.
ಬೀಜ ವಿತರಣೆ ಪ್ರಾರಂಭದಲ್ಲಿ ಗದ್ದಲವಾದ ಹಿನ್ನಲೆಯಲ್ಲಿ ಪೋಲಿಸರ್ ಬಂದುಬಸ್ತಿಯಲ್ಲಿ ತೊಗರಿ ಬೀಜ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೈತರಾದ ಬಲವಂತಪ್ಪ ಹೂಗಾರ, ಶಂಕರ ಹೂಗಾರ, ಮಾಳು ಪೂಜಾರಿ, ಮಲ್ಲೇಶಿ ರಾಣಿ, ಬುಡ್ಡೇಸಾ ಮುಲ್ಲಾ, ಭೀಮಣ್ಣ ಪೂಜಾರಿ, ಖಾದರ ಬಂಕಲಗಿ, ಸೇರಿದಂತ ವಿವಿಧ ಹಳ್ಳಿಯಿಂದ ರೈತರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 