ಅನುಭಾವದ ಚಿಂತಕ ಶರಣ ಮಾದಾರ ಚೆನ್ನಯ್ಯ
Sharan Madara Chennaiyya, an experienced thinker
ಧಾರವಾಡ 24 : ನಗರದ ಯಾಲಕ್ಕಿಶೆಟ್ಟರ ಕಾಲೋನಿಯ ಬಸವೇಶ್ವರ ಭವನದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ಆಶ್ರಯದಲ್ಲಿ ಶಿವಶರಣ ಮಾದಾರ ಚೆನ್ನಯ್ಯ ಅವರ ಜಯಂತಿ ಆಚರಿಸಲಾಯಿತು.
ಮುಖ್ಯ ಎಂಜನೀಯರ್ ಹಯಾಳಪ್ಪ ಖದ್ರಾಪೂರ ಜಯಂತಿ ಉದ್ಘಾಟಿಸಿದರು. ವಿವಿಧ ವಿಷಯಗಳನ್ನು ಕೇಂದ್ರೀಕರಿಸಿ ಡಾ.ಮಾಲತೇಶ ಬಸಮ್ಮನವರ, ಡಾ.ಎಂ.ಜಿ.ಹರಿಹರ ಹಾಗೂ ಗುರುದೇವ ಕಳ್ಳಿಮನಿ ಮಾತನಾಡಿ, ಅನುಭವ ಮಂಟಪದಲ್ಲಿ ಮತ್ತು ತಮ್ಮ ವಚನಗಳಲ್ಲಿ ಅನುಭಾವದ ಚಿಂತಕರಾಗಿ ಶಿವಶರಣ ಮಾದಾರ ಚೆನ್ನಯ್ಯ ಅವರು ಎದ್ದುಕಾಣುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆಯೂ ಜರುಗಿತು. ಮಹಾಸಭಾ ಅಧ್ಯಕ್ಷ ಪಿ.ವೆಂಕಪ್ಪ ಅಧ್ಯಕ್ಷತೆವಹಿಸಿದ್ದರು. ಕ.ವಿ.ವಿ. ಸಿಂಡಿಕೇಟ ಸದಸ್ಯ ಮಹೇಶ ಹುಲ್ಲೆಣ್ಣವರ, ಶಿಕ್ಷಣ ಇಲಾಖೆಯ ನಿವೃತ್ತ ಪತ್ರಾಂಕಿತ ಅಧಿಕಾರಿ ಕೆ.ಎಸ್.ಬಂಗಾರಿ, ಆಂಜನೇಯ ಅರವೇಡ, ಕೆ.ಎಂ. ಪೂಜಾರ, ಮಹೇಶ ನಾಗಣ್ಣವರ, ಬಸವರಾಜ ಶಿವಪೂರ ಮಾದಿಗ ಮಹಾಸಭಾದ ವಿಭಿನ್ನ ಚಟುವಟಿಕೆಗಳ ಕುರಿತು ಮಾತನಾಡಿದರು. ವಿವಿಧ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ನಿವೃತ್ತ ಜೆ.ಡಿ. ಭೀಮಪ್ಪ, ಯಲ್ಲಪ್ಪ ಜಕನೂರ, ಪರಷುರಾಮ ಪೂಜಾರ, ತಿಪ್ಪಣ್ಣಾ ಕೊಣ್ಣೂರ, ಡಾ. ಮಲ್ಲಿಕಾರ್ಜುನ ಬ್ಯಾಲ್ಯಾಳ, ಡಾ. ಸದಾಶಿವ ನಡುವಿನಕೇರಿ, ಡಾ. ರಾಜು, ಡಾ. ಚಂದ್ರ್ಪ, ವಕೀಲ ಶಿವಪ್ರಸಾದ ಕಾಲವಾಡ, ಲಕ್ಷ್ಮಣ ಟ್ಯಾಗೋರ, ಮೈಲಾರೆಪ್ಪ ಮಾದರ, ರಮೇಶ ಜಾಲಿಹಾಳ, ಸುರೇಶ ಪೂಜಾರ, ಮಹಾದೇವ ತಳವಾರ ಇತರರು ಇದ್ದರು. ಪಿ.ಡಿ. ಬಸನಾಳ ಶರಣರ ವಚನಗಳನ್ನು ಪ್ರಸ್ತುತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 