ಬಳ್ಳಾರಿ 01: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಬಳ್ಳಾರಿ ಶಾಖೆಯ ವಿದ್ಯಾರ್ಥಿಗಳ ವಿಭಾಗಕ್ಕೆ(ಖಋಂಖಂ) ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಶಾಖೆಯ ವಿದ್ಯಾರ್ಥಿಗಳ ವಿಭಾಗದ ಅಧ್ಯಕ್ಷರಾಗಿ ಸಿ.ಎ, ಶರಣ್ ಪಾಟೀಲ್, ಉಪಾಧ್ಯಕ್ಷರಾಗಿ ನಿಶ್ಮಿತಾ ಕೆ.ಎನ್, ಕಾರ್ಯದರ್ಶಿಯಾಗಿ ವಿಷ್ಣು ಕಾರ್ತಿಕ್, ಖಜಾಂಚಿಯಾಗಿ ತನಿಷಾ ಮತ್ತು ಸದಸ್ಯರಾಗಿ ಮಧುಸೂನದ ಅವರನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿ ವಿಭಾಗದ ಮುಖ್ಯ ಕೆಲಸವೆಂದರೆ ವಿದ್ಯಾರ್ಥಿಗಳಲ್ಲಿ ಸಿಎ ಕೋರ್ಸಿನ ಬಗ್ಗೆ ಅರಿವು ಮೂಡಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಿ ಅವರನ್ನು ವಿದ್ಯಾವಂತರಾಗಿ ಮತ್ತು ಸಮಾಜದಲ್ಲಿ ಯೋಗ್ಯ ನಾಗರಿಕರಾಗಿ ಮಾಡುವುದು. ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ದಕ್ಷಿಣ ಪ್ರಾಂತೀಯ ಮಾಜಿ ಅಧ್ಯಕ್ಷರಾದ ಸಿಎ ಪನ್ನರಾಜ್ ಮತ್ತು ವಿದ್ಯಾರ್ಥಿ ವಿಭಾಗದ ದಕ್ಷಿಣ ಪ್ರಾಂತೀಯ ಅಧ್ಯಕ್ಷರಾದ ಸಿಎ ಪ್ರಮೋದ್ ಆರ್ ಹೆಗಡೆ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಸಿಎ ಗಜರಾಜ್ ಡಿ, ಕಾರ್ಯದರ್ಶಿಗಳಾದ ಸಿಎ ವಿಶ್ವನಾಥ್ ಆಚಾರಿ ಮತ್ತು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಇತರರು ಉಪಸ್ಥಿತರಿದ್ದರು.