ಎಸ್‌ಎಫ್‌ಐ ಸಮಿತಿಗೆ ಹಾವೇರಿ ಜಿಲ್ಲೆಯಿಂದ ಆಯ್ಕೆ

ಹಾವೇರಿ 01: ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) 16ನೇ ರಾಜ್ಯ ಸಮ್ಮೇಳನವು ಚಿಕ್ಕಬಳ್ಳಾಪುರ ಜಿಲ್ಲೆಯ ಕೆ.ಇ.ಬಿ ಸಭಾ ಭವನದಲ್ಲಿ ಮೂರು ದಿನಗಳ ನಡೆಯಿತು.ಈ ಸಮ್ಮೇಳನದಲ್ಲಿ ನೂತನ ರಾಜ್ಯ ಸಮಿತಿಗೆ ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಉಪಾಧ್ಯಕ್ಷರಾಗಿ ಬಸವರಾಜ ಎಸ್,ರಾಜ್ಯ ಪದಾಧಿಕಾರಿ ದುರಗಪ್ಪ ಯಮ್ಮಿಯವರ,ರಾಜ್ಯ ಸಮಿತಿ ಸದಸ್ಯರಾಗಿ ಶೃತಿ ಎಂ.ಅರ್,ಸುಲೇಮಾನ್ ಮತ್ತಿಹಳ್ಳಿ ಅವರು ಸರ್ವಾನುಮತದಿಂದ ಆಯ್ಕೆಯಾದರು ಎಂದು ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.