ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ

ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ  Science exhibition for students

ಧಾರವಾಡ  01: ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ   ಮಂಜುನಾಥೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ: 01-01-2026 ರ ಗುರುವಾರದಂದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಏರಿ​‍್ಡಸಲಾಗಿತ್ತು, ನೂರಾರು ಮಕ್ಕಳು ಭಾಗವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ   ಬಸವರಾಜ ಜ್ಯೋತಿಯವರು ಮಕ್ಕಳನ್ನುದ್ದೇಶಿಸಿ ವಿಜ್ಞಾನದ ಪ್ರಗತಿಯಿಂದ ಜಗತ್ತಿನಲ್ಲಿ ಆಗಿರುವಂತಹ ಬದಲಾವಣೆಯ ಬಗ್ಗೆ ವಿವರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಇಂದಿನ ದಿನಮಾನಗಳಲ್ಲಿನ ವಿದ್ಯಮಾನ ಕುರಿತು ತರಗತಿಗಳಲ್ಲಿ ಸಮೂಹ ಮಾಧ್ಯಮಗಳಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದರು. ಶಾಲೆಯ ಪ್ರಧಾನ ಗುರುಮಾತೆ ಶ್ರೀಮತಿ: ಪಿ,ಎಸ್,ಸುಧಾಮಣಿಯವರು ಹಾಗೂ ಶಿಕ್ಷಕ ಸಿಬ್ಬಂಧಿಯವರು, ವಿದ್ಯಾರ್ಥಿಗಳು ಪಾಲ್ಲೊಂಡಿದ್ದರು.