ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಚಲವಾದಿಗೆ ಸತ್ಕಾರ

ಸಂಬರಗಿ 19: ಅಬಕಾರಿ ಇಲಾಖೆಯ ಜಂಟಿ ಆಯುಕ್ತರು ಎಚ್‌.ಎಫ್ ಚಲವಾದಿ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನಂತರ, ಅಥಣಿ ತಾಲೂಕ ಹಾಗೂ ಗಡಿ ಭಾಗದ ಅಬಕಾರಿ ಸಂಘದ ವತಿಯಿಂದ ಮಧಬಾವಿ ಗ್ರಾಮ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ನಿಜಗುಣಿ ಮಗದುಮ್ ಇವರು ಬೆಳಗಾವಿಯಲ್ಲಿ ಸತ್ಕರಿಸಿ ಗಡಿ ಭಾಗದ ಹಲವಾರು ಸಮಸ್ಯೆಗಳನ್ನು ಅವರ ಮುಂದೆ ಇಟ್ಟರು.ಅಥಣಿ ತಾಲೂಕಿನ ಗಡಿ ಭಾಗದ ಎಲ್ಲಾ ಅಬಕಾರಿ ಸಂಘದ ಪದಾಧಿಕಾರಿಗಳು ಸೇರಿ ಬೆಳಗಾವಿಯಲ್ಲಿ ಅವರನ್ನು ಸತ್ಕರಿಸಿದರು. ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಮದಭಾವಿ ಉಪಾಧ್ಯಕ್ಷ ಅಶೋಕ್ ಪೂಜಾರಿ ಅಣ್ಣ ಸಾಬ್ ಮೇಂಡಿಗೇರಿಇನ್ನಿತರರು ಉಪಸ್ಥಿತರಿದ್ದರು.