ರಾಮನವಮಿ ಪ್ರಯುಕ್ತ ಸಾಯಿಬಾಬಾ ದರ್ಶನ
ಶಿಗ್ಗಾವಿ 06: ರಾಮನವಮಿಯ ಪ್ರಯುಕ್ತ ಹಾವೇರಿ ಶಹರದ ಅಶ್ವಿನಿ ನಗರದಲ್ಲಿರುವ ಸಾಯಿ ಮಂದಿರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿರವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂಧರ್ಭದಲ್ಲಿ ಯುವ ಮುಖಂಡ ಭರತ ಬೊಮ್ಮಾಯಿ, ಮಂಜುನಾಥ ಉಡುಪಿ, ಹರ್ತಿ ಸೇರಿದಂತೆ ಸಾಯಿಬಾಬಾ ದೇವಸ್ಥಾನದ ಟ್ರಸ್ಟ್ ಕಮೀಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.