ಹೆಬ್ಬಾರರ ತ್ಯಾಗ: ಬಿಜೆಪಿ ಅಧಿಕಾರಕ್ಕೆ
ಮುಂಡಗೋಡ: ಬಿಜೆಪಿ ಅಧಿಕಾರಕ್ಕೆ ಬರಲು ಶಿವರಾಮ ಹೆಬ್ಬಾರ ತ್ಯಾಗ ಮಾಡಿದ್ದಾರೆ ನಾವು ಎಲ್ಲರೂ ಸಂಘಟಿತರಾಗಿ ಅವರನ್ನು ಗೆಲ್ಲಿಸಬೇಕಾಗಿದೆ. ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು.
ಅವರು ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಯಲ್ಲಾಪೂರದಲ್ಲಿನ ಮುಂಡಗೋಡ ರಸ್ತೆಯಲ್ಲಿರುವ ವಾಯ್.ಟಿಎಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೃಹತ್ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನ ಬಳವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಅಭ್ಯಥರ್ಿ ಶಿವರಾಮ ಹೆಬ್ಬಾರ ಮಾತನಾಡಿ ಕಾಂಗ್ರೆಸ್ನಲ್ಲಿದ್ದಾಗ ಕ್ಷೇತ್ರದ ಅಭಿವೃದ್ದಿ ಕಾಣಲಿಲ್ಲ ಜನರ ಸೇವೆ ಮಾಡಲು ಯಡ್ಯೂರಪ್ಪ ನವರಿಂದ ಕನರ್ಾಟಕದಲ್ಲಿ ರಾಮರಾಜ್ಯ ನೋಡಲು ಸಾಧ್ಯ ಇದಕ್ಕಾಗಿ ನಾವು 17 ಜನ ಶಾಸಕರು ಕಾಂಗ್ರೆಸ್ ವನ್ನು ಬಿಟ್ಟು ಬಿಜೆಪಿ ಸೇರಿದೇವು ಎಂದರು.
ಅನಂತಕುಮಾರ ಹೆಗಡೆ ಮಾತನಾಡಿದ ರಾಮಮಂದಿರ ತೀಪರ್ು ಬಂದಾಗ ಮುಸಲ್ಮಾನರು ವಿರೋಧ ವ್ಯಕ್ತಪಡಿಸಲಿಲ್ಲ ಆದರೆ ಕಾಂಗ್ರೆಸ್ ಮಾತ್ರ ದೀಪಾವಳಿ ಆಚರಿಸಲಿಲ್ಲ ಎಂದರು ಈ ಸಂದರ್ಭದಲ್ಲಿ ಮುಜರಾಯಿ ಖಾತೆ ಸಚಿವ ಕೊಟಾ ಶ್ರೀನಿನಾಸ ಪೂಜಾರ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಸೊರಭಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ, ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಕಾರವಾರ ಕ್ಷೇತ್ರದ ವಿಧಾನ ಸಭಾ ಸದಸ್ಯ ರೂಪಾಲಿ ನಾಯಕ್, ಭಟ್ಕಳ ಶಾಸಕ ಸುನೀಲ ನಾಯ್ಕ ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ. ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ ಹಾಗೂ ಕ್ಷೇತ್ರದ ಮೂರು ತಾಲೂಕಿನ ತಾಲೂಕ ಬಿಜೆಪಿ ಮಂಡಲದ ಅಧ್ಯಕ್ಷರು ಮುಂತಾದವರು ವೇದಿಕೆ ಮೇಲಿದ್ದರು. ಮುಂಡಗೋಡ ದಿಂದ ಫಣಿರಾಜ ಹದಳಗಿ, ಉಮೇಶ ಬಿಜಾಪುರ, ಸೇರಿದಂತೆ ಮುಸ್ಲೀಂ ಮುಖಂಡರಾದ ಮಹ್ಮದಗೌಸಅತ್ತಾರ, ಅಲ್ಲಿಖಾನ ಪಠಾಣ, ಮಹ್ಮದರಫೀಕ ಇನಾಮದಾರ, ಲತೀಫ ನಾಲ ಬಂದ ಮಹ್ಮದಶರೀಫ ಕರಿಂಸಾಬನವರ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಯಲ್ಲಾಪುರಕ್ಕೆ ಧಾವಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 