ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ ಆತಂಕ ...!!!.
ನವದೆಹಲಿ, ಮಾ 9, ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ, ಕುಸಿತ ಮುಂದುವರಿದಿದೆ.
ಇಂದು ಬೆಳಗಿನ ಆರಂಭಿಕ ವ್ಯವಹಾರದಲ್ಲಿ ಬಿಎಸ್ಇ ಸೆನ್ಸೆಕ್ಸ್ 2,000ಕ್ಕೂ ಹೆಚ್ಚು ಅಂಕಗಳಷ್ಟು (ಶೇ. 4.5ರಷ್ಟು) ಕುಸಿತ ಕಂಡಿತು. ನಿಫ್ಟಿ ಕೂಡ 400ಕ್ಕೂ ಹೆಚ್ಚು ಪಾಯಿಂಟ್ ಕಳೆದುಕೊಂಡಿದೆ ಹಲವು ಅನುಮಾನಗಳಲ್ಲೇ ಹೂಡಿಕೆದಾರರು ಸೋಮವಾರದ ವಹಿವಾಟು ಪ್ರಾರಂಭಿಸಿದ್ದಾರೆ.
ಸನ್ ಫಾರ್ಮದ ಷೇರು ಮೌಲ್ಯ ಮಾತ್ರ ಕೊಂಚ ಏರಿಕೆಯಾಗಿರುವುದನ್ನು ಬಿಟ್ಟರೆ ಉಳಿದಂತೆ ಬೇರೆ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ.
ಜಾಗತಿಕ ತೈಲ ಬೆಲೆಯಲ್ಲಿ ಕುಸಿತವಾಗಿರುವುದು; ಕೊರೋನಾ ವೈರಸ್ ಸೋಂಕಿನ ವೇಗ ಹೆಚ್ಚಾಗುತ್ತಿರುವುದು ; ಯೆಸ್ ಬ್ಯಾಂಕ್ ಸಂಕಷ್ಟದಲ್ಲಿರುವುದು ಹೀಗೆ ವಿವಿಧ ಕಾರಣಗಳು ಷೇರುಪೇಟೆಯನ್ನು ನಲುಗಿಸುತ್ತಿವೆ.ಹೂಡಿಕೆದಾರರ ವಿಶ್ವಾಸ ಕುಂದುತ್ತಿದೆ ತೈಲ ಬೆಲೆ ಕುಸಿತದಿಂದಾಗಿ ಓಎನ್ಜಿಸಿ ಕಂಪನಿಯ ಷೇರು ಶೇ. 11ರಷ್ಟು ಮೌಲ್ಯ ಕುಸಿತ ಕಂಡಿದೆ.ಆರ್ಐಎಲ್, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಸ್ಟೀಲ್, ಎಲ್ ಅಂಡ್ ಟಿ ಮತ್ತು ಟೆಕ್ ಮಹೀಂದ್ರ ಕಂಪನಿಗಳ ಷೇರುಗಳೂ ಕೂಡ ಸಾಕಷ್ಟು ನಷ್ಟ ಮಾಡಿಕೊಂಡಿವೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 