ದ್ವಿತೀಯ-ಅಂತಿಮ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆಗೆ ಎಸ್ಎಫ್ಐ ಆಗ್ರಹ.

ರಾಣೇಬೆನ್ನೂರು01: ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಶನಿವಾರ ಸ್ಥಳೀಯ ಸರಕಾರಿ ಪದವಿ ಕಾಲೇಜ್ ಎದುರು ಪ್ರತಿಭಟಿಸಿ ಆನಂತರ ಕಾಲೇಜಿನ ಪ್ರಾಂಶುಪಾಲರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

       ಎಸ್ಎಫ್ಐ ಜಿಲ್ಲಾ ಸಹ ಕಾರ್ಯದಶರ್ಿ ಬಸವರಾಜ ಭೋವಿ ಮಾತನಾಡಿ ರಾಜ್ಯ ಸಕರ್ಾರ ವಿದ್ಯಾರ್ಥಿಗಳಿಗೆ ನೀಡಬೇಕಾದ ಸರಕಾರಿ ಸೌಲಭ್ಯಗಳನ್ನು ವಿದ್ಯಾಥರ್ಿಗಳ ಮಧ್ಯೆ ತಾರತಮ್ಯ ಮಾಡುತ್ತಿದ್ದೆ ಇದು ತೀವ್ರ ಖಂಡನೀಯ  ಕಳೆದ ರಾಜ್ಯ ಸಕರ್ಾರವು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ನೀಡುತ್ತಿತ್ತು ಎಸ್ಎಫ್ಐ ರಾಜ್ಯಾದ್ಯಂತ ಹೋರಾಟ ಮಾಡಿ ಎಲ್ಲಾ ವರ್ಗದ ವಿದ್ಯಾಥರ್ಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಡ ಹಾಕಲಾಯಿತು ಎಂದರು.

     ಎರಡು ಅವಧಿಯ ವಿದ್ಯಾಥರ್ಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡಬೇಕು ಈ ವರ್ಷ ಅಂತಿಮ ವರ್ಷದಲ್ಲಿರುವುದರಿಂದ ತಂತ್ರಜ್ಞಾನ ಬಳಕೆ ಮಾಡಿಕೊಳ್ಳದೆ ಗುಣಾತ್ಮಕ ಕಲಿಕೆಯಲ್ಲಿ ವಿದ್ಯಾಥರ್ಿಗಳು ಹಿಂದೆ ಬೀಳುವಂತಾಗಿದ್ದು ಆದಕಾರಣ ಎರಡೂ ವರ್ಷದ ಅವಧಿಯಲ್ಲಿಯ ವಿದ್ಯಾಥರ್ಿಗಳಿಗೆ ಅನ್ಯಾಯವಾಗದಂತೆ ಅತ್ಯಂತ ತ್ವರಿತಗತಿಯಲ್ಲಿ  ನ್ಯಾಯ ಒದಗಿಸಿ ಉನ್ನತ ಶಿಕ್ಷಣದ ಸಹಕಾರಕ್ಕೆ ರಾಜ್ಯ ಸಕರ್ಾರ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.

        ಎಸ್ಎಫ್ಐ ಮುಖಂಡ ಬಿರೇಶ ಹೀಲದಹಳ್ಳಿ ಮಾತನಾಡಿ 2016-17 ನೇ ಸಾಲಿನ ಪದವಿ ವಿದ್ಯಾಥರ್ಿಗಳಿಗೆ ಉಚಿತ ಲ್ಯಾಪ್ಟಾಪ್ ಹಂಚಲಾಗುತ್ತದೆ. ಆದರೆ 2017-18 ಮತ್ತು 2018-19 ನೇ ಸಾಲಿನಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ವಿಚಾರಿಸಿದಾಗ ಸರಕಾರದಿಂದ ಬಂದ ತಕ್ಷಣ ನಿಮಗೆ ಕೋಡುತ್ತೇವೆಂದು ಹೇಳುತ್ತಾ ಬಂದಿದೆ ಎಂದರು.

   ಈಗ ಕೇವಲ 2019-20 ನೇ ಸಾಲಿನ ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ಪದವಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಮಾತ್ರ ಲ್ಯಾಪ್ಟಾಪ್ ಹಂಚುತ್ತಿದ್ದು 2017-18 ಮತ್ತು 2018-19 ನೇ ಸಾಲಿನಲ್ಲಿ ಪದವಿಗೆ ಪ್ರವೇಶ ಪಡೆದ ನಾವುಗಳಿಗೆ ಅದರಲ್ಲೂ 2017-18 ರಲ್ಲಿ ಪಡೆದ ವಿದ್ಯಾಥರ್ಿಗಳಿಗೆ ಅನ್ಯಾಯವಾಗುತ್ತದೆ ಆದರಿಂದ ವಿದ್ಯಾಥರ್ಿಗಳ ಮಧ್ಯ ತಾರತಮ್ಯ ಮಾಡದೇ ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾಥರ್ಿಗಳಿಗೂ ಉಚಿತ ಲ್ಯಾಪ್ಟಾಪ್ ಕೊಡಲೇಬೇಕು ಎಂದು ಆಗ್ರಹಿಸಿದರು.

   ತಾಲ್ಲೂಕು ಅಧ್ಯಕ್ಷ ಪ್ರಮೋದ್ ಮುದ್ದಿ, ಕಾರ್ಯದಶರ್ಿ ಲಕ್ಷ್ಮಣ ಕೆಂಗಪ್ಪಳವರ,  ಉಪಾಧ್ಯಕ್ಷೆ ಜ್ಯೋತಿ ಪೋಲಿಸ್ಗೌಡರ, ಶಿವರಾಜ್ ಗುತ್ತಲ, ಷಣ್ಮುಖ  ಬೀರಜ್ಜರ, ನಿರಂಜನ್, ಎನ್ ಎಮ್, ದಿನೇಶ್ ಗೋಪಿನಾಳ, ಮರಿಯಪ್ಪ ಪೂಜಾರ, ರೂಪ ಲಮಾಣಿ, ಕಾವ್ಯ ಎಸ್, ನಾಗರತ್ನ ಎಮ್ ಡಿ, ಅಕ್ಷತಾ ಕೆ ಆರ್, ಭವ್ಯ ವೈ ಎಸ್, ಕೀತರ್ಿನ್ ಪಾಟೀಲ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.