ಅತಿರುದ್ರ ಮಹಾಯಜ್ಞ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ವಿತರಣೆ
Rudraksha distribution at the Atirudra Mahayajna program
ಗದಗ 13: ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯ ಅಡಿಯಲ್ಲಿ ನಾಗಾಸಾಧು ಸಹದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದ ಅಂಗವಾಗಿ ನಾಗಾಸಾಧುಗಳಿಂದ ನಗರದ ಭಕ್ತಾಧಿಗಳಿಗೆ ಲಕ್ಷ ರುದ್ರಾಕ್ಷಿ ವಿತರಣೆ ಕಾರ್ಯಕ್ರಮದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ರುದ್ರಾಕ್ಷಿ ಆಶೀರ್ವಾದ ಪಡೆದರು.
ಅತಿರುದ್ರ ಮಹಾಯಜ್ಞದಲ್ಲಿ ಭಾಗವಹಿಸಿ ಶಿವಲಿಂಗದ ರುದ್ರಾಭಿಷೇಕ ಮಾಡುವದರಿಂದ 1.25 ಲಕ್ಷ ಮಹಾ ಮೃತ್ಯುಂಜಯದ ಜಪದ ಫಲ ಪ್ರಾಪ್ತಿಯಾಗುತ್ತದೆ. ಧನಾತ್ಮಕ ಶಕ್ತಿಯ ಹೆಚ್ಚಳ: ಯಾಗದ ಸಮಯದಲ್ಲಿ ಬಲವಾದ ಧನಾತ್ಮಕ ಶಕ್ತಿಯ ಸೃಷ್ಟಿಯಾಗುವದರಿಂದ ಪರಿಸರವನ್ನು ಮತ್ತು ಪಾಲ್ಗೊಂಡವರ ಶೃದ್ದೀಕರಿಸುತ್ತದೆ.
ನಕಾರಾತ್ಮಕ ಶಕ್ತಿಗಳ ನಿವಾರಣೆ: ಭಗವಾನ ರುದ್ರನು ಸಮಸ್ತ ನಕರಾತ್ಮಕ ಶಕ್ತಿಗಳ ನಿವಾರಕನಾಗಿರುವದರಿಂದ ಈ ಯಾಗದಿಂದ ನಕರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಅತಿರುದ್ರ ಮಹಾಯಜ್ಞದಿಂದ ಲಕ್ಷ್ಮೀ ದೇವಿಯ ಅನುಗ್ರಹವಾಗುತ್ತದೆ.
ಶಿವನ ಆಶೀರ್ವಾದ: ಅತಿರುದ್ರ ಯಾಗವು ತ್ರಿಲೋಕಗಳ ಅಧಿಪತಿಯಾದ ಭಗವಾನ ರುದ್ರನನ್ನು ಪ್ರಾರ್ಥಿಸುವ ಒಂದು ಆಚರಣೆಯಾಗಿರುತ್ತದೆ. ಇದರಿಂದ ರುದ್ರನ ಕರುಣೆ ಮತ್ತು ಅನುಗ್ರಹವನ್ನು ಪಡೆಯಲು ಹಾಗೂ ಮೋಕ್ಷ ಹೊಂದುವ ಶ್ರೇಷ್ಟ ಮಾರ್ಗವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 