ಅತಿರುದ್ರ ಮಹಾಯಜ್ಞ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ವಿತರಣೆ
Rudraksha distribution at the Atirudra Mahayajna program
ಗದಗ 13: ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯ ಅಡಿಯಲ್ಲಿ ನಾಗಾಸಾಧು ಸಹದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದ ಅಂಗವಾಗಿ ನಾಗಾಸಾಧುಗಳಿಂದ ನಗರದ ಭಕ್ತಾಧಿಗಳಿಗೆ ಲಕ್ಷ ರುದ್ರಾಕ್ಷಿ ವಿತರಣೆ ಕಾರ್ಯಕ್ರಮದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ರುದ್ರಾಕ್ಷಿ ಆಶೀರ್ವಾದ ಪಡೆದರು.
ಅತಿರುದ್ರ ಮಹಾಯಜ್ಞದಲ್ಲಿ ಭಾಗವಹಿಸಿ ಶಿವಲಿಂಗದ ರುದ್ರಾಭಿಷೇಕ ಮಾಡುವದರಿಂದ 1.25 ಲಕ್ಷ ಮಹಾ ಮೃತ್ಯುಂಜಯದ ಜಪದ ಫಲ ಪ್ರಾಪ್ತಿಯಾಗುತ್ತದೆ. ಧನಾತ್ಮಕ ಶಕ್ತಿಯ ಹೆಚ್ಚಳ: ಯಾಗದ ಸಮಯದಲ್ಲಿ ಬಲವಾದ ಧನಾತ್ಮಕ ಶಕ್ತಿಯ ಸೃಷ್ಟಿಯಾಗುವದರಿಂದ ಪರಿಸರವನ್ನು ಮತ್ತು ಪಾಲ್ಗೊಂಡವರ ಶೃದ್ದೀಕರಿಸುತ್ತದೆ.
ನಕಾರಾತ್ಮಕ ಶಕ್ತಿಗಳ ನಿವಾರಣೆ: ಭಗವಾನ ರುದ್ರನು ಸಮಸ್ತ ನಕರಾತ್ಮಕ ಶಕ್ತಿಗಳ ನಿವಾರಕನಾಗಿರುವದರಿಂದ ಈ ಯಾಗದಿಂದ ನಕರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಅತಿರುದ್ರ ಮಹಾಯಜ್ಞದಿಂದ ಲಕ್ಷ್ಮೀ ದೇವಿಯ ಅನುಗ್ರಹವಾಗುತ್ತದೆ.
ಶಿವನ ಆಶೀರ್ವಾದ: ಅತಿರುದ್ರ ಯಾಗವು ತ್ರಿಲೋಕಗಳ ಅಧಿಪತಿಯಾದ ಭಗವಾನ ರುದ್ರನನ್ನು ಪ್ರಾರ್ಥಿಸುವ ಒಂದು ಆಚರಣೆಯಾಗಿರುತ್ತದೆ. ಇದರಿಂದ ರುದ್ರನ ಕರುಣೆ ಮತ್ತು ಅನುಗ್ರಹವನ್ನು ಪಡೆಯಲು ಹಾಗೂ ಮೋಕ್ಷ ಹೊಂದುವ ಶ್ರೇಷ್ಟ ಮಾರ್ಗವಾಗಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 