ಸಂಗೊಳ್ಳಿ ರಾಯಣ್ಣನ ನಾಮಫಲಕ ಮರು ಅಳವಡಿಸಬೇಕೆಂದು : ನಿವೃತ್ತ ಎಸ್ಪಿ ಅಶೋಕ ಸದಲಗೆ ಆಗ್ರಹ
ಲೋಕದರ್ಶನ ವರದಿ
ಬೆಳಗಾವಿ 11: ಜಿಲ್ಲಾಧಿಕಾರಿ ಎದುರಿನ ರಸ್ತೆಯ ಸಂಗೊಳ್ಳಿ ರಾಯಣ್ಣ ನಾಮಫಲಕ ಕಿತ್ತೆಸೆದ ಸಮಾಜ ಘಾತುಕರನ್ನು ಕೂಡಲೆ ಪತ್ತೆಹಚ್ಚಿ ಬಂದಿಸಬೇಕೆಂದು ನಿವೃತ್ತ ಎಸ್ಪಿ ಅಶೋಕ ಸದಲಗೆ ಅವರು ಆಕ್ರೋಶ ವ್ಯಕ್ತ ಪಡಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನನವಿ ಸಲ್ಲಿಸಿ ಆರ್ಟಿಓ ವೃತ್ತದಿಂದ ಚನ್ನಮ್ಮ ವೃತ್ತದವರೆಗಿನ ರಸ್ತೆ ಸಂಗೊಳ್ಳಿ ರಾಯಣ್ಣ ರಸ್ತೆಯೆಂದೆ ಹಲವು ವರ್ಷಗಳಿಂದ ಹೆಸರಿಸಲಾಗಿದೆ. ಇಂತಹ ರಸ್ತೆಯ ರಸ್ತೆಯ ನಾಮಪಲಕವನ್ನು ಕಿತ್ತು ಕಸದಲ್ಲಿ ಎಸೆಯುವದು ಯಾವ ನ್ಯಾಯ. ಇದರಿಂದ ಕ್ರಾಂತಿವೀರ ರಾಯಣ್ಣನ ಅಭಿಮಾಗಳಿಗೆ ಬಹಳಷ್ಟು ಅವಮಾನವಾಗಿದೆ. ಈ ನಾಮಪಲಕವನ್ನು ತಕ್ಷಣವೇ ಜಿಲ್ಲಾಡಳಿತವು ಮರು ಅಳವಡಿಸಬೇಕು. ಪ್ರಾದೇಶಿಕ ಆಯುಕ್ತರ ಕಚೇರಿಎದುರಿನ ಉದ್ಯಾನವನದಲ್ಲಿ ರಾಯಣ್ಣನ ಮೂತರ್ಿಯನ್ನು ಪ್ರತಿಷ್ಟಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಆರ್ಪಿ ಪಾಟೀಲ,ಲಕ್ಕಪ್ಪ ಅಲೋಶಿ, ಮಾಜಿ ಮಹಾಪೌರ ಯಲ್ಲಪ್ಪ ಕುರಬರ, ನಿವೃತ್ತ ಮೇಜರ್ ಗಂಗಾರಾಮ ಬಾಗನ್ನವರ, ಶಂಕರ ಹೆಗಡೆ, ಬಾಬು ಸಾಂಬ್ರೇಕರ, ಯಲ್ಲಪ್ಪ ಉಚಗಾಂವಕರ,ಬಿಎಸ್ ಹಡಗಿನಾಳ, ಹಾಗೂ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 