ಅಂಗನವಾಡಿ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಡುವಂತೆ ಒತ್ತಾಯಿಸಿ ಮನವಿ
ಯಲ್ಲಾಪುರ: ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಮಾತಿಗೆ ಸಮಾಜದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಇದಕ್ಕೆ ತಕ್ಕಂತೆ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿ ಗ್ರಾಮದ ಮಜ್ಜಿಗೆಹಳ್ಳದಲ್ಲಿ ಅಗತ್ಯವಿದ್ದ ಅಂಗನವಾಡಿಗಾಗಿ ನಿಮರ್ಿಸಲಾದ ನೂತನ ಕಟ್ಟಡದ ಕಥೆ ವ್ಯಥೆಪಡುವಂತಿದೆ. 12 ಮಕ್ಕಳನ್ನು ಹೊಂದಿರುವ ಇಲ್ಲಿಯ ಅಂಗನವಾಡಿ ತಾತ್ಕಾಲಿಕ ಶೆಡ್ವೊಂದರಲ್ಲಿ ನಡೆಯುತ್ತಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಇಲಾಖೆ ಈ ಸಾಲಿನ ಜಿ.ಪಂ ಆರ್.ಐ.ಡಿಎಫ್ 21 ಲೆಕ್ಕ ಶಿಶರ್ಿಕೆ ಯೋಜನೆಯಡಿ ನೂತನ ಕಟ್ಟಡ ನಿಮರ್ಾಣಕ್ಕಾಗಿ 9.17 ಲಕ್ಷ ರೂ. ಗಳ ಅನುದಾನವನ್ನು ಒದಗಿಸಿ, ಕಟ್ಟಡ ಕಾಮಗಾರಿ ಆರಂಭಗೊಂಡು ಶೆ.90 ರಷ್ಟು ಪೂರ್ಣಗೊಂಡಿದೆ. ಈ ಪ್ರಕ್ರಿಯೆಗೆ ಕನಿಷ್ಠ 3 ತಿಂಗಳು ಕಳೆದಿದೆಯಾದರೂ ಅಂಗನವಾಡಿಯೊಂದರಲ್ಲಿ ಅಗತ್ಯವಿರುವ ಶೌಚಾಲಯಕ್ಕೆ ಬಾಗಿಲು ಮತ್ತು ಅಂಗಡನವಾಡಿಯ ಪ್ರವೇಶ ದ್ವಾರದ ಬಾಗಿಲನ್ನು ಅಳವಡಿಸದಿರುವುದು ಅಚ್ಚರಿಯ ಸಂಗತಿಯಾಗಿದೆಯಲ್ಲದೇ, ಸೋರುತ್ತಿರುವ ಶೆಡ್ನಲ್ಲಿ ಅಂಗನವಾಡಿ ನಡೆಸುವ ಬದಲಿಗೆ ಹೊಸ ಕಟ್ಟಡ ಕಣ್ಣಿಗೆ ಕಾಣುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಮತ್ತು ಉದ್ಘಾಟನೆಯ ಭಾಗ್ಯ ನೆರವೇರದಿರುವುದರಿಂದ ಅಲ್ಲಿ ಅಂಗನವಾಡಿಯನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ.
ಮುಖ್ಯವಾಗಿ ನೂತನವಾಗಿ ನಿಮರ್ಿಸಲಾದ ಅಂಗನವಾಡಿಯಲ್ಲಿ ಅಗತ್ಯವಿರುವ ಬಾಗಿಲನ್ನು ಅಳವಡಿಸದಿರುವುದು ಕಟ್ಟದೊಳಗೆ ಪ್ರಾಣಿ-ಪಕ್ಷಿಗಳಿಗೆ ವಾಸಸ್ಥಾನವಾದಂತಾಗಿದೆ. ಕಟ್ಟಡದೊಳಗೆ ನಿಮರ್ಿಸಲಾದ ನೆಲ ಈಗಾಗಲೇ ಬಿರುಕುಬಂದಿದ್ದು, ಉಳಿದಂತೆ ಯಾವ ಕಾಮಗಾರಿಯೂ ವೈಜ್ಞಾನಿಕ ಸ್ವರೂಪದಲ್ಲಿ ನಡೆದಿಲ್ಲವೆಂದು ಈ ಕುರಿತು ಗ್ರಾಮಸ್ಥರು ತೀವೃ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೇ, ಕಟ್ಟಡ ಗುತ್ತಿಗೆದಾರ ಗಜಾನನ ನಾಯ್ಕ ಯೋಜಿತ ರೀತಿಯಲ್ಲಿ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 