ಛಾಯಾಗ್ರಾಹಕರಿಂದ ಆಥರ್ಿಕ ಸಹಾಯಕ್ಕಾಗಿ ಮನವಿ
ಮಹಾಲಿಂಗಪುರ 11: ಪಟ್ಟಣದ ವಲಯ ಛಾಯಾಗ್ರಾಹಕ ಸಂಘದ ಪರವಾಗಿ ಪದಾಧಿಕಾರಿಗಳು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಆಥರ್ಿಕ ಸಹಾಯಕ್ಕಾಗಿ ಮನವಿಯನ್ನು ನೀಡಿ ಭರವಸೆ ಪಡೆದರು.
ಈ ಮನವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸರಕಾರಿ, ಅರೆ ಸರಕಾರಿ ನೌಕರರಿಗೆ, ಸಂಘಟಿತ ಹಾಗೂ ಅಸಂಘಟಿತ ಕಾಮರ್ಿಕರಿಗೆ ಪರಿಹಾರ ಧನ ನೀಡಿದ್ದು ಅದೇ ರೀತಿಯಾಗಿ ಅಸಂಘಟಿತ ವಲಯವಾದ ಛಾಯಾಗ್ರಾಹಕರು ಎರಡು ತಿಂಗಳುಗಳಿಂದ ಸಭೆ-ಸಮಾರಂಭಗಳು, ಶಾಲಾ ಕಾಲೇಜುಗಳಿಲ್ಲದೆ ಅಂಗಡಿ ಬಾಡಿಗೆ, ಅಂಗಡಿಗೆ ಬೇಕಾಗುವ ಸಲಕರಣೆಗಳನ್ನು ಸಾಲ ಮಾಡಿ ತಂದಿರುವ ಕಾರಣ ಸಹಜವಾಗಿ ಇದರ ಬಡ್ಡಿ, ಲೈಟ್ ಬಿಲ್ಲು ಇನ್ನೂ ಅನೇಕ ತರಹದ ತೊಂದರೆಗಳು ತಲೆದೊರಿದ್ದು ಇನ್ನೂ ಎಷ್ಟು ದಿವಸ ಈ ಕೊರೊನಾ ಭಯ ಕಾಡುತ್ತೋ ಗೊತ್ತಿಲ್ಲ.
ಬಡ ಕುಟುಂಬಗಳಿಂದ ಬಂದಿರುವ ಛಾಯಾಗ್ರಾಹಕ ಹಾಗೂ ಸಹಾಯಕರಿಗೆ ಕೊರೊನಾ ಕಾಟದಿಂದ ಜೀವನೋಪಾಯದ ಎಲ್ಲ ಮಾರ್ಗಗಳು ಬಂದ ಆಗಿವೆ.ಕಾರಣ ಈ ಕಾಯಕವನ್ನೇ ಮೆಚ್ಚಿ ಜೀವನ ನಿರ್ವಹಣೆ ನಡೆಸುತ್ತಿರುವ ಈ ಕುಟುಂಬಗಳಿಗೆ ಸರಕಾರಗಳು ಆಥರ್ಿಕ ನೆರವು ನೀಡಿ ಈ ಉದ್ಯಮವನ್ನು ಪುನ ಚೇತನಗೊಳಿಸಬೇಕಾಗಿದೆ ಎಂದು ಮನವಿ ಪತ್ರದಲ್ಲಿ ಅರುಹಿಕ್ಕೊಳ್ಳಲಾಗಿದೆ.
ಈ ಸಮಯದಲ್ಲಿ ಶಿವಾನಂದ ಅಂಗಡಿ, ಮಹಾಲಿಂಗ ಸೋರಗಾವಿ, ಪ್ರಶಾಂತ ಕಡಪಟ್ಟಿ, ಸುದರ್ಶನ ಹಿಕಡಿ, ಅಭಿಷೇಕ ಗುಮಟೆ, ಮುತ್ತು ಕುಂಬಾರ, ರಾಕೇಶ ಕುಳಲಿಮಠ, ಸುನಿಲ ಅಂಬಿ, ಶಿವಾನಂದ ಮುಚಖಂಡಿ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 