ಛಾಯಾಗ್ರಾಹಕರಿಂದ ಆಥರ್ಿಕ ಸಹಾಯಕ್ಕಾಗಿ ಮನವಿ
ಮಹಾಲಿಂಗಪುರ 11: ಪಟ್ಟಣದ ವಲಯ ಛಾಯಾಗ್ರಾಹಕ ಸಂಘದ ಪರವಾಗಿ ಪದಾಧಿಕಾರಿಗಳು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಆಥರ್ಿಕ ಸಹಾಯಕ್ಕಾಗಿ ಮನವಿಯನ್ನು ನೀಡಿ ಭರವಸೆ ಪಡೆದರು.
ಈ ಮನವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸರಕಾರಿ, ಅರೆ ಸರಕಾರಿ ನೌಕರರಿಗೆ, ಸಂಘಟಿತ ಹಾಗೂ ಅಸಂಘಟಿತ ಕಾಮರ್ಿಕರಿಗೆ ಪರಿಹಾರ ಧನ ನೀಡಿದ್ದು ಅದೇ ರೀತಿಯಾಗಿ ಅಸಂಘಟಿತ ವಲಯವಾದ ಛಾಯಾಗ್ರಾಹಕರು ಎರಡು ತಿಂಗಳುಗಳಿಂದ ಸಭೆ-ಸಮಾರಂಭಗಳು, ಶಾಲಾ ಕಾಲೇಜುಗಳಿಲ್ಲದೆ ಅಂಗಡಿ ಬಾಡಿಗೆ, ಅಂಗಡಿಗೆ ಬೇಕಾಗುವ ಸಲಕರಣೆಗಳನ್ನು ಸಾಲ ಮಾಡಿ ತಂದಿರುವ ಕಾರಣ ಸಹಜವಾಗಿ ಇದರ ಬಡ್ಡಿ, ಲೈಟ್ ಬಿಲ್ಲು ಇನ್ನೂ ಅನೇಕ ತರಹದ ತೊಂದರೆಗಳು ತಲೆದೊರಿದ್ದು ಇನ್ನೂ ಎಷ್ಟು ದಿವಸ ಈ ಕೊರೊನಾ ಭಯ ಕಾಡುತ್ತೋ ಗೊತ್ತಿಲ್ಲ.
ಬಡ ಕುಟುಂಬಗಳಿಂದ ಬಂದಿರುವ ಛಾಯಾಗ್ರಾಹಕ ಹಾಗೂ ಸಹಾಯಕರಿಗೆ ಕೊರೊನಾ ಕಾಟದಿಂದ ಜೀವನೋಪಾಯದ ಎಲ್ಲ ಮಾರ್ಗಗಳು ಬಂದ ಆಗಿವೆ.ಕಾರಣ ಈ ಕಾಯಕವನ್ನೇ ಮೆಚ್ಚಿ ಜೀವನ ನಿರ್ವಹಣೆ ನಡೆಸುತ್ತಿರುವ ಈ ಕುಟುಂಬಗಳಿಗೆ ಸರಕಾರಗಳು ಆಥರ್ಿಕ ನೆರವು ನೀಡಿ ಈ ಉದ್ಯಮವನ್ನು ಪುನ ಚೇತನಗೊಳಿಸಬೇಕಾಗಿದೆ ಎಂದು ಮನವಿ ಪತ್ರದಲ್ಲಿ ಅರುಹಿಕ್ಕೊಳ್ಳಲಾಗಿದೆ.
ಈ ಸಮಯದಲ್ಲಿ ಶಿವಾನಂದ ಅಂಗಡಿ, ಮಹಾಲಿಂಗ ಸೋರಗಾವಿ, ಪ್ರಶಾಂತ ಕಡಪಟ್ಟಿ, ಸುದರ್ಶನ ಹಿಕಡಿ, ಅಭಿಷೇಕ ಗುಮಟೆ, ಮುತ್ತು ಕುಂಬಾರ, ರಾಕೇಶ ಕುಳಲಿಮಠ, ಸುನಿಲ ಅಂಬಿ, ಶಿವಾನಂದ ಮುಚಖಂಡಿ ಮುಂತಾದವರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 