ನೆಮ್ಮದಿ ಕೇಂದ್ರ ಮತ್ತು ತಲಾಟಿ ಕಚೇರಿ ಸ್ಥಳಾಂತರ
Relocation of the Peace Center and Talati Office
ವರದಿ: ಹಣಮಂತ ನಾವಿ
ಮಹಾಲಿಂಗಪುರ 25: ಗಾಂಧಿ ವೃತ್ತದಲ್ಲಿರುವ ನೆಮ್ಮದಿ ಕೇಂದ್ರ ಮತ್ತು ತಲಾಟಿ ಕಚೇರಿ ಗಳ ಮೇಲ್ಚಾವಣಿಗಳು ಶಿಥಿಲಗೊಂಡು, ಅವುಗಳ ಮೂಲಕ ಮಳೆ ನೀರು ಕಚೇರಿ ತುಂಬಾ ಹರಡಿ ಆಡಳಿತಾತ್ಮಕವಾಗಿ ಸಮಸ್ಯೆ ಉಂಟು ಮಾಡಿದ್ದವು.
ಇವುಗಳ ದುರುಸ್ಥಿ ಅಥವಾ ಬೇರೆಡೆ ಸ್ಥಳಾಂತರ ಮಾಡಲಿಕ್ಕೆ ಸಾರ್ವಜನಿಕರು ಮತ್ತು ಸಮ್ಮಂಧಿಸಿದ ಅಧಿಕಾರಿಗಳು ಪದೇ ಪದೇ ಆಡಳಿತಕ್ಕೆ ಒತ್ತಾಯಪಡಿಸುತ್ತ ಬಂದಿದ್ದರೂ ಸಹ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿತ್ತು.
ಸಾರ್ವಜನಿಕರ ಅಹವಾಲು ವಿನಂತಿಗೆ ''ಲೋಕದರ್ಶನ" ದಿನಪತ್ರಿಕೆಯಲ್ಲಿ ಆಗಷ್ಟ 19 ರಂದು ಸಮಸ್ಯೆಗಳ ಕುರಿತು ವರದಿ ಪ್ರಕಟಿಸಿತ್ತು.
ಹಲವಾರು ಬಾರಿ ಸಾರ್ವಜನಿಕರು ಮತ್ತು ಪತ್ರಿಕೆಗಳು ಮಳೆಯಿಂದ ಕಚೇರಿಗಳ ಕೊಠಡಿಗಳಲ್ಲಿ ಆಗುವ ಆವಾಂತರದ ಬಗ್ಗೆ ತಾಲೂಕಾಢಳಿತ ಮತ್ತು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಕಾರಣಾಂತರಗಳಿಂದಲೋ ಏನೋ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಸಾಧ್ಯವಾಗಿತ್ತು.
ಈಗ ಕಾಲ ಕೂಡಿ ಬಂದಿದ್ದು ಮೇಲ್ಕಾಣಿಸಿದ ಎರಡೂ ಕಚೇರಿಗಳನ್ನು ಬಸ್ ನಿಲ್ದಾಣ ಹತ್ತಿರ ಚೆನ್ನಮ್ಮ ವೃತ್ತದಲ್ಲಿರುವ ಪುರಸಭೆ ಎರಡನೇಯ ಅಂತಸ್ತಿನ ಮಳಿಗೆಗಳಿಗೆ ಸ್ಥಳಾಂತರಿಸಿ ಸುಗಮ ಕೆಲಸಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 