ನೆಮ್ಮದಿ ಕೇಂದ್ರ ಮತ್ತು ತಲಾಟಿ ಕಚೇರಿ ಸ್ಥಳಾಂತರ
Relocation of the Peace Center and Talati Office
ವರದಿ: ಹಣಮಂತ ನಾವಿ
ಮಹಾಲಿಂಗಪುರ 25: ಗಾಂಧಿ ವೃತ್ತದಲ್ಲಿರುವ ನೆಮ್ಮದಿ ಕೇಂದ್ರ ಮತ್ತು ತಲಾಟಿ ಕಚೇರಿ ಗಳ ಮೇಲ್ಚಾವಣಿಗಳು ಶಿಥಿಲಗೊಂಡು, ಅವುಗಳ ಮೂಲಕ ಮಳೆ ನೀರು ಕಚೇರಿ ತುಂಬಾ ಹರಡಿ ಆಡಳಿತಾತ್ಮಕವಾಗಿ ಸಮಸ್ಯೆ ಉಂಟು ಮಾಡಿದ್ದವು.
ಇವುಗಳ ದುರುಸ್ಥಿ ಅಥವಾ ಬೇರೆಡೆ ಸ್ಥಳಾಂತರ ಮಾಡಲಿಕ್ಕೆ ಸಾರ್ವಜನಿಕರು ಮತ್ತು ಸಮ್ಮಂಧಿಸಿದ ಅಧಿಕಾರಿಗಳು ಪದೇ ಪದೇ ಆಡಳಿತಕ್ಕೆ ಒತ್ತಾಯಪಡಿಸುತ್ತ ಬಂದಿದ್ದರೂ ಸಹ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿತ್ತು.
ಸಾರ್ವಜನಿಕರ ಅಹವಾಲು ವಿನಂತಿಗೆ ''ಲೋಕದರ್ಶನ" ದಿನಪತ್ರಿಕೆಯಲ್ಲಿ ಆಗಷ್ಟ 19 ರಂದು ಸಮಸ್ಯೆಗಳ ಕುರಿತು ವರದಿ ಪ್ರಕಟಿಸಿತ್ತು.
ಹಲವಾರು ಬಾರಿ ಸಾರ್ವಜನಿಕರು ಮತ್ತು ಪತ್ರಿಕೆಗಳು ಮಳೆಯಿಂದ ಕಚೇರಿಗಳ ಕೊಠಡಿಗಳಲ್ಲಿ ಆಗುವ ಆವಾಂತರದ ಬಗ್ಗೆ ತಾಲೂಕಾಢಳಿತ ಮತ್ತು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಕಾರಣಾಂತರಗಳಿಂದಲೋ ಏನೋ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಸಾಧ್ಯವಾಗಿತ್ತು.
ಈಗ ಕಾಲ ಕೂಡಿ ಬಂದಿದ್ದು ಮೇಲ್ಕಾಣಿಸಿದ ಎರಡೂ ಕಚೇರಿಗಳನ್ನು ಬಸ್ ನಿಲ್ದಾಣ ಹತ್ತಿರ ಚೆನ್ನಮ್ಮ ವೃತ್ತದಲ್ಲಿರುವ ಪುರಸಭೆ ಎರಡನೇಯ ಅಂತಸ್ತಿನ ಮಳಿಗೆಗಳಿಗೆ ಸ್ಥಳಾಂತರಿಸಿ ಸುಗಮ ಕೆಲಸಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 