ಕಂಪ್ಯೂಟರ್ ಆಪರೇಟರಗಳ ಕಾನೂನು ಬದ್ಧವಾಗಿಯೇ ನೇಮಕಾತಿ: ಪಿ.ಕೆ.ಪಿ.ಎಸ್ ಅಧ್ಯಕ್ಷ ರುದ್ರಗೌಡ ಪಾಟೀಲ
Recruitment of computer operators is done in accordance with the law: PKPS President Rudragowda Pati
ಅಥಣಿ 13 : ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಅವಶ್ಯವಾಗಿ ಬೇಕಾಗಿದ್ದ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಕಾನೂನು ಬದ್ಧವಾಗಿಯೇ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಇದನ್ನು ಸಹಿಸದ ಕೆಲವರು ವಿನಾಕಾರಣ ಅಪ ಪ್ರಚಾರ, ಆರೋಪ ಮಾಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ ಹೇಳಿದರು. ಅವರು ಸಹಕಾರಿ ಸಂಘದ ಆಡಳಿತ ಮಂಡಳಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನೇಮಕಾತಿ ಪೂರ್ವದಲ್ಲಿ ಆಡಳಿತ ಮಂಡಳಿಯಲ್ಲಿ ಠರಾವ್ ಪಾಸ್ ಮಾಡಿ ನಂತರ ದಿನ ಪತ್ರಿಕೆಯಲ್ಲಿ ಜಾಹಿರಾತು ಪ್ರಕಟಿಸಲಾಗಿತ್ತು ಜೊತೆಗೆ ಸಂಘದ ನೋಟಿಸ್ ಬೋರ್ಡ ಮೇಲೆ ಕೂಡ ಅಂಟಿಸಲಾಗಿತ್ತು ಎಂದ ಅವರು ಕೇವಲ ಒಬ್ಬ ಅಭ್ಯರ್ಥಿಯಿಂದ ಅರ್ಜಿ ಬಂದಿರುವುದರಿಂದ ಅನಿವಾರ್ಯವಾಗಿ ಅದೇ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ನೇಮಕಾತಿ ಮಾಡಿಕೊಳ್ಳಲು ಅವಶ್ಯವಾಗಿ ಬೇಕಾದ ಪಿ.ಯು.ಸಿ ಶಿಕ್ಷಣ ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜಮೆಂಟ್ ಶೈಕ್ಷಣಿಕ ಅರ್ಹತೆಯನ್ನೂ ಸಹ ಪರಿಗಣಿಸಲಾಗಿದೆ ಮತ್ತು ಸಹಕಾರ ಇಲಾಖೆಯ ನಿಯಮಗಳ ಅನುಸಾರ ಸ್ಥಳೀಯ ಅಭ್ಯರ್ಥಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಡಳಿತ ಮಂಡಳಿ ಸದಸ್ಯ ರಮೇಶ ಪಾಟೀಲ ಮಾತನಾಡಿ, ಕಾನೂನು ಬದ್ಧವಾಗಿ ಮಾಡಿಕೊಂಡಿರುವ ನೇಮಕಾತಿಯಾಗಿರುವುದನ್ನು ಸಹಿಸದ ಕೆಲವರು ವಿನಾಕಾರಣ ಗೊಂದಲ ಸೃಷ್ಠಿ ಮಾಡಿ ಸಹಕಾರ ಸಂಘದ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದ ಅವರು ಆಡಳಿತ ಮಂಡಳಿಯ ಎಲ್ಲ 12 ಜನ ಸದಸ್ಯರು ಸಹಿ ಮಾಡಿ ಠರಾವ್ ಪಾಸ್ ಮಾಡಿ ನಿರಂಜನ ಬಸಪ್ಪಾ ಮಸರಗುಪ್ಪಿ ಇವರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ದಳವಾಯಿ ಮಾತನಾಡಿ, ನೇಮಕಾತಿಯಲ್ಲಿ ಅವ್ಯವಹಾರವಾಗಿರುವ ಬಗೆಗೆ ಸಂಶಯ ಇದ್ದಲ್ಲಿ ನೇರವಾಗಿ ಸಹಕಾರ ಇಲಾಖೆಗೆ ದೂರು ನೀಡಿ ಎಂದ ಅವರು ಮುಂದಿನ ದಿನಗಳಲ್ಲಿ ಮತ್ತೆ ಯಾರಾದರೂ ಸಹಕಾರಿ ಸಂಘದ ಕಛೇರಿ ಎದುರು ಪ್ರತಿಭಟನೆ ಮಾಡುವ ಪ್ರಯತ್ನ ಮಾಡಿದಲ್ಲಿ ಅಂತವರ ವಿರುದ್ಧ ನಾವು ಕೂಡ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪಾಂಡುರಂಗ ಕಾಂಬಳೆ, ಆಡಳಿತ ಮಂಡಳಿಯ ಸದಸ್ಯರಾದ ನಿಂಗಪ್ಪ ಮಾಲಗಾಂವಿ, ರುದ್ರಗೌಡ ಪಾಟೀಲ, ಭೀಮಣ್ಣಾ ತಳವಾರ, ರಮೇಶ ಕುಂಬಾರ, ಭಾಹುಸಾಹೇಬ ಶಿಂಧೆ, ಮಾರೂತಿ ನಾಯಿಕ ಕಾರ್ಯದರ್ಶಿ ಬಸಪ್ಪ ಮಸರಗುಪ್ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 