27ರಂದು ಈದ್ ಮಿಲನ್ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ
Rasamanjari program for Eid Milan on 27th
ಕೊಪ್ಪಳ 22: ರಫೀ ಮೆಲೋಡಿ ಕೊಪ್ಪಳ ವತಿಯಿಂದ ಈದ್ ಮಿಲನ್ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಇದೇ ದಿ, 27 ರವಿವಾರ ಸಂಜೆ 5:30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ.
ಸಮಾರಂಭದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಸಂಸದ ಕೆ ರಾಜಶೇಖರ ಹಿಟ್ನಾಳ್ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸೈಯದ್ ಲ್ಯಾಂಡ್ ಡೆವಲಪರ್ ನಾಸಿರ್ ಹುಸೇನ್ ನಗರಸಭೆ ಮಾಜಿ ಸದಸ್ಯ ಎಂ ಪಾಷಾ ಮಾನ್ವಿ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಹುಸೇನ್ ಪೀರಾ ಮುಜಾವರ್ ಲ್ಯಾಂಡ್ ಡೆವಲಪರ್ ಜಾಕೀರ್ ಹುಸೇನ್ ಖಾನ್ ಕುಷ್ಟಗಿ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ಸಮಾಜದ ಮುಖಂಡ ವಜೀರ್ ಸಾಬ್ ದಪೇದಾರ್ ಅಲ್ಲದೆ ಸಂಘಟಕ ಸೈಯದ್ ಇಮಾಮ ಹುಸೇನ್ ಸಿಂದೋಗಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಸದರಿ ಈದ್ ಮಿಲನ್ ರಸಮಂಜರಿ ಕಾರ್ಯಕ್ರಮದಲ್ಲಿ ಕೊಪ್ಪಳದ ಗಾಯಕರಾದ ಮೊಹಮ್ಮದ್ ರಫಿ, ಭಾಷಾ ಹಿರೇಮನಿ ಕಿನ್ನಾಳ ಮತ್ತು ದಾವುದ್ ಹುನಗುಂದ್ ಸೇರಿದಂತೆ ಮಹಿಳಾ ಗಾಯಕಿಯರು ಹಾಸ್ಯ ಕಲಾವಿದರು ಪಾಲ್ಗೊಂಡು ತಮ್ಮ ಗಾಯನದ ಮೂಲಕ ಜನಮನ ರಂಜಿಸಲಿದ್ದಾರೆ ಎಂದು ರಫಿ ಮೆಲೋಡಿಸ್ ಕೊಪ್ಪಳದ ಸಮಸ್ತ ಕಲಾವಿದರು ಪ್ರಕಟಣೆ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 