ರನ್ನ ಬೆಳಗಲಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ರನ್ನ ಬೆಳಗಲಿ 17: ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಗುರುವಾರದಂದು  ಸ್ಥಳೀಯ ವಾಲ್ಮೀಕಿ ಸಮುದಾಯದ ಹಿರಿಯರ ಸಂಯೋಗದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.  

ಮಹರ್ಷಿ ವಾಲ್ಮೀಕಿ ಸಮುದಾಯದ ಅಧ್ಯಕ್ಷ ಭೀಮಪ್ಪ ನಾಯಕ ಪೂಜಾ ಕಾರ್ಯವನ್ನು ನೆರವೇರಿಸಿದರು. ಮಹರ್ಷಿ ವಾಲ್ಮೀಕಿ ಋಷಿಗಳ ಅಮೋಘ ಸಾಧನೆಯಿಂದ ನಮ್ಮ ಸಮುದಾಯದ ಕೀರ್ತಿ ನಾಡಿನಗಲಕ್ಕೂ ವಿಸ್ತರಿಸಿದೆ. ಸಮಾಜದ ಹಿರಿಯರ ಸಹಕಾರ ಮತ್ತು ಮಾರ್ಗದರ್ಶನ ನಮ್ಮ ಸಮುದಾಯ ಮೇಲೆ ಇರಲಿ ಎಂದು ತಿಳಿಸಿದರು.ಪಟ್ಟಣ ಪಂಚಾಯತ್ ಸದಸ್ಯರಾದ ಮುತ್ತಪ್ಪ ನಾಯಕ, ಯುವ ಮುಖಂಡರಾದ ಸಂಗಪ್ಪ ಅಮಾತಿ, ಪ್ರಥಮ ದರ್ಜೆ ಸಹಾಯಕ ಪರಶುರಾಮ ನಾಗನೂರ, ವಸೂಲಿ ಸಹಾಯಕ ಮಹಾಲಿಂಗಪ್ಪ ಸಮೇರ, ಸಮುದಾಯದ ಹಿರಿಯರಾದ ಮಾರುತಿ ನ್ಯಾಮಗೌಡರ, ಸತ್ಯಪ್ಪ ಬೀಳಗಿ, ಗಂಗಪ್ಪ ನಾಯಕ, ಬಸಪ್ಪ ಮಾಳಗಿ, ಪರಸಪ್ಪ ಕುರಿಯರ, ಮಹಾನಿಂಗ ನಾಯಕ, ಮತ್ತು ಶಿವಾನಂದ ಬಾವಿಮನಿ, ಸತ್ಯಪ್ಪ ಹನಗಂಡಿ, ರಾಮಣ್ಣ ಹುನ್ನೂರ, ಅಮಿನಸಾಬ್ ನದಾಫ್, ವೆಂಕಪ್ಪ ಕ್ವಾನ್ಯಾಗೋಳ, ಮಹಾದೇವ ಉಸಳಿ, ಲಕ್ಷ್ಮಣ ಗಸ್ತಿ, ವಿಠ್ಠಲ ಬಾವಿಮನಿ ನಾಗಪ್ಪ ಬಟಾಟೆಪ್ಪಗೋಳ ಇನ್ನಿತರರು ಪಾಲ್ಗೊಂಡಿದ್ದರು.