ನದಿಯಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ರಾಜು ಕಾಗೆ 10 ಲಕ್ಷ ಪರಿಹಾರ
Raju Kage gives 10 lakhs as compensation to family swept away in river
ನದಿಯಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ರಾಜು ಕಾಗೆ 10 ಲಕ್ಷ ಪರಿಹಾರ
ಸಂಬರಗಿ 31: ಮೇ.27 ಮಂಗಳವಾರದಂದು ನಾಗನೂರ ಪಿ.ಎ ಗ್ರಾಮ ಸಂಜು ಕಾಂಬಳೆ ಇವರ ಎರಡು ಪುತ್ರರು ಅಗ್ರಾಣಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ಶಾಸಕ ರಾಜು ಕಾಗೆ ಇವರು ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ 10 ಲಕ್ಷರೂಪಾಯಿ ಪರಿಹಾರ ಧನ ನೀಡಿದರು. ಈ ವೇಳೆ ಶಾಸಕ ರಾಜು ಕಾಗೆ ಮಾತನಾಡಿಅಗ್ರಾಣಿ ನದಿಯಾಗಲಿ, ಕೃಷ್ಣಾ ನದಿಯಾಗಲಿ ಪ್ರವಾಹ ಬಂದ ನಂತರ ನೀರಿನಲ್ಲಿಯಾರೂ ಗಾಡಿಗಳ ಮುಖಾಂತರಗ್ರಾಮಕ್ಕೆ ಹೋಗುವ ದುಸ್ಸಾಹಸ ಮಾಡಬಾರದು, ಇಲ್ಲವಾದರೆಇಂತಹ ಅನಾಹುತಗಳಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.ರೈತರು ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ತಮ್ಮಚಿಕ್ಕ ಮಕ್ಕಳನ್ನು ನದಿಯಕಡೆಗೆಕರೆದುಕೊಂಡು ಹೋಗಬಾರದು ಎಂಬ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದರು. ಈ ವೇಳೆ ಸಂಬರಗಿಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಲ್ಲಿಕಾರ್ಜುನ ದಳವಾಯಿ, ಉಪಾಧ್ಯಕ್ಷರಾದ ಅಶೋಕ ಬಾಬು ಮಾನೆ, ಶ್ರೀಶೈಲ ಪಾಟೀಲ, ಪಿ.ಕೆ.ಪಿ.ಎಸ್ಉಪಾಧ್ಯಕ್ಷಅಣ್ಣಪ್ಪ ಮಿಸಾಳ, ರಮೇಶ ಪಾಟೀಲ, ಅಮೃತ ಮಿಸಾಳ, ಅಬ್ದುಲ್ಮುಲ್ಲಾ, ತಹಶೀಲ್ದಾರ ಸಿದರಾಯ ಬೋಸಗೆ, ಉಪತಹಶೀಲ್ದಾರ ಅಮೀತ ಡವಳೇಶ್ವರ,ಜಿಲ್ಲಾ ಪಂಚಾಯತಅಭಿಯಂತರರಾದ ವೀರಣ್ಣ ವಾಲಿ,ಕಂದಾಯ ನಿರಿಕ್ಷಕರು ವಿನೋದಕದಮ್, ಮಹೇಳ ಕಾಂಬಳೆ, ಅರವಿಂದ ಕಾಂಬಳೆ, ಪಾಂಡುರಂಗ ಕಾಂಬಳೆ ಇನ್ನೀತರ ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 