ಭೂಕುಸಿತದಿಂದ ಸ್ಥಗತಗೊಂಡಿದ್ದ ಲೋಂಡ-ತಿನೈ ಘಾಟ್ ನಡುವಿನ ರೈಲು ಮಾರ್ಗ ಪುನರಾರಂಭ
ಬೆಳಗಾವಿ, ಆ, 5 ಭಾರೀ ಮಳೆಯಿಂದ ಸ್ಥಗಿತಗೊಂಡಿದ್ದ ಬೆಳಗಾವಿ ಭಾಗದ ಲೋಂಡ ಹಾಗೂ ತಿನೈ ಘಾಟ್ ರೈಲು ಸಂಚಾರ ಪುನರಾರಂಭಗೊಂಡಿದೆ. ಮಳೆಯಿಂದ ರೈಲು ಹಳಿ ಕೆಳಭಾಗದಲ್ಲಿ ಲಘು ಭೂಕುಸಿತ ಉಂಟಾಗಿರುವುದರಿಂದ ಈ ಮಾರ್ಗದ ಎಲ್ಲಾ ರೈಲು ಸಂಚಾರವನ್ನು ನಿನ್ನೆಯಿಂದ ಸ್ಥಗಿತಗೊಳಿಸಲಾಗಿತ್ತು. ಪ್ರತಿಕೂಲ ಹವಾಮಾನದಿಂದ ಬೆಳಗಾವಿ - ಕ್ಯಾಸಲ್ ರಾಕ್ ನಡುವಿನ ರೈಲು ಮಾರ್ಗಗಳನ್ನು ಸಹ ಭಾಗಶಃ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಗಾವಿಯಿಂದ ಕ್ಯಾಸ್ಟಲ್ ರಾಕ್ ಗೆ ಪ್ರಯಾಣಿಸಬೇಕಿದ್ದ ಕ್ಯಾಸ್ಟಲ್ ರಾಕ್-ಮಿರಾಜ್ ಪ್ರಯಾಣಿಕರ ರೈಲನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ರೈಲ್ವೆ ಹಿರಿಯ ಅಧಿಕಾರಿಗಳು ಕಳೆದ 24 ಗಂಟೆಗಳಿಂದ ನಿರಂತರ ದುರಸ್ತಿ ಕಾರ್ಯ ಕೈಗೊಂಡ ಪರಿಣಾಮ ಇದೀಗ ರೈಲು ಸೇವೆ ಯಥಾಸ್ಥಿತಿಗಿಗೆ ಮರಳಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 