ಗೃಹ ತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಕಾರ್ಯಕ್ರಮ

ಗೃಹ ತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಕಾರ್ಯಕ್ರಮ Public awareness program on household waste management

ಲೋಕದರ್ಶನ ವರದಿ 

ಧಾರವಾಡ ಫೆ.05: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 12 ರ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 21 ರ ಮಸಾಲಗರ ಓಣಿಯ ಕೊಳಚೆ ಪ್ರದೇಶದಲ್ಲಿ ಇಂದು (ಫೆ.05) ಪಾಲಿಕೆಯಿಂದ ಸ್ವಚ್ಚ ಭಾರತ 2.0 ಅಂಗವಾಗಿ ಕಡ್ಡಾಯವಾಗಿ ಕಸವನ್ನು ಪಾಲಿಕೆಯ ವಾಹನಕ್ಕೆ ಕೊಡುವುದು, ಹಸಿ ಕಸ ಮತ್ತು ಒಣ ಕಸವನ್ನಾಗಿ ಬೇರಿ​‍್ಡಸಿ ಕೊಡುವುದು, ಕಸವನ್ನು ಎಲ್ಲೆಂದರಲ್ಲಿ ಹೊರಗಡೆ ಚೆಲ್ಲಾಡಿರುವುದರ ಕುರಿತು ಅರಿವು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಪಾಲಿಕೆಯ ವಲಯ ಆಯುಕ್ತರಾದ ಶಂಕರ ಪಾಟೀಲ, ವಾರ್ಡ್‌ ಸದಸ್ಯರಾದ ಆನಂದ ಯಾವಗಲ, ಆರೋಗ್ಯ ನೀರೀಕ್ಷಕರಾದ ಸಿದ್ಧಾರ್ಥ್‌, ನೀಲಮ್ಮ, ಪೂಜಾ, ಸಮುದಾಯ ಸಂಚಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.