ಡಿಇಬಿಎಂ ವಿದ್ಯಾರ್ಥಿ ಗಳಿಗೆ ಪ್ರಾಜೆಕ್ಟ್ ರಿಪೋಟರ್್ ಸಿದ್ಧತೆ ಕಾರ್ಯಾ ಗಾರ
ಲೋಕದರ್ಶನ ವರದಿ
ಬೆಳಗಾವಿ 14: ಕೆಎಲ್ಎಸ್ ಐಎಂಇಆರ್ ಸಂಸ್ಥೆಯ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವು ಮೆ.10 ರಂದು ಹೊಸ ಉದ್ಯಮ ಅವಕಾಶಗಳ ಗುರುತಿಸುವಿಕೆ ಹಾಗೂ ವಿವರವಾದ ಬಿಸನೆಸ್ ಪ್ಲ್ಯಾನ್ ತಯಾರಿಸುವಿಕೆ ಕುರಿತು ಅಹಮದಾಬಾದ್ನ ಭಾರತೀಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ (ಇಡಿಐಐ) ಸಹಯೋಗದಲ್ಲಿ ಒಂದು ದಿನದ ಕಾಯರ್ಾಗಾರ ಹಮ್ಮಿಕೊಂಡಿತ್ತು. ಸಂಸ್ಥೆಯ ಒಂದು ವರ್ಷದ ಡಿಪ್ಲೊಮಾ ಇನ್ ಎಂತ್ರಾಪ್ರೆನ್ಯೂರ್ಶಿಪ್ ಆ್ಯಂಡ್ ಬಿಸಿನೆಸ್ ಮ್ಯಾನೆಜ್ಮೆಂಟ್ (ಡಿಇಬಿಎಂ) ವಿದ್ಯಾಥರ್ಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯಶಸ್ವಿ ನಾಗ್, ಉದ್ಯಮದ ಸ್ವರೂಪ ಯೋಚಿಸುವಿಕೆ ಹಾಗೂ ಹೊಸ ಉದ್ಯಮಗಳ ಯೋಜನೆಗಳ ಬಗ್ಗೆ ವಿವರಿಸಿದರು. ಇದಲ್ಲದೇ ಬಂಡವಾಳ ಹಾಗೂ ಸಾಲ ಪಡೆಯಲು ಸಿಡ್ಬಿ (ಸಣ್ಣ ಉದ್ಯಮೆಗಳ ಬ್ಯಾಂಕ್ ಆಫ್ ಇಂಡಿಯಾ) ಮಾರ್ಗದಶರ್ಿ ಸೂತ್ರಗಳಿಗೆ ಅನುಗುಣವಾಗಿ ವಿವರವಾದ ಪ್ರಾಜೆಕ್ಟ್ ರಿಪೋಟರ್್ ತಯಾರಿಸುವ ಕುರಿತು ವಿದ್ಯಾರ್ಥಿ ಗಳೊಂದಿಗೆ ಚಚರ್ಿಸಿದರು.
ವಿದ್ಯಾರ್ಥಿ ಗಳು ತಂಡದಲ್ಲಿ ವಿವಿಧ ಉದ್ಯಮ ಅವಕಾಶಗಳು ಹಾಗೂ ವಿವರವಾದ ಪ್ರಾಜೆಕ್ಟ್ ರಿಪೋಟರ್್ ಕರಡು ಪ್ರತಿ ಸಿದ್ಧಪಡಿಸಿದರು.
ಕೆಎಲ್ಎಸ್ ಐಎಂಇಆರ್ ನಿರ್ದೇ ಶಕರಾದ ಡಾ. ಅತುಲ್ ದೇಶಪಾಂಡೆ ಮಾತನಾಡಿ, ವಿದ್ಯಾಥರ್ಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಡಾ. ಪೂಣರ್ಿಮಾ ಚರಂತಿಮಠ ಶಿಬಿರವನ್ನು ಸಂಯೋಜಿಸಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 