ಹಾವೇರಿ: ಮಾ.18: ಜಿಲ್ಲೆಯ 223 ಗ್ರಾಮ ಪಂಚಾಯತಿಗಳ ಪೈಕಿ ಅವಧಿ ಪೂರ್ಣಗೊಳಿಸಿದ 207 ಗ್ರಾಮ ಪಂಚಾಯತಿಗಳಿಗೆ ಬರುವ ಮೇ-2020ರ ಮಾಹೆಯಲ್ಲಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟಾರೆ 223 ಗ್ರಾಮ ಪಂಚಾಯತಿಗಳಿವೆ. ಈ ಪೈಕಿ 207 ಗ್ರಾಮ ಪಂಚಾಯತ್ಗಳಿಗೆ ಈ ಪಂಚಾಯತಿಗಳ 1045 ಕ್ಷೇತ್ರಗಳ 2932 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
2020ರ ಜೂನ್ ಮಾಹೆಯಲ್ಲಿ ಅವಧಿ ಪೂರ್ಣಗೊಳ್ಳಲಿರುವ ಜಿಲ್ಲೆಯ 16 ಗ್ರಾಮ ಪಂಚಾಯತಿಗಳಾದ ಆಲದಕಟ್ಟಿ, ತಡಸ, ಕಾಗಿನೆಲೆ, ಕೆರವಡಿ, ಅಂತರವಳ್ಳಿ, ಕುಪ್ಪೇಲೂರು, ಬಿಲ್ಲದಹಳ್ಳಿ, ಮಾಳನಾಯಕನಹಳ್ಳಿ, ಸುಣಕಲ್ಲಬಿದರಿ, ತುಮ್ಮಿನಕಟ್ಟೆ, ಜೋಯಿಸರಹರಳಹಳ್ಳಿ, ಕುಡುಪಲಿ, ಹುಲ್ಲತ್ತಿ, ಹಾವಣಗಿ, ಕೂಡಲ, ಹನುಮರಹಳ್ಳಿ ಪಂಚಾಯತಿಗಳ ಅವಧಿ ವಿಳಂಬವಾಗಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮ ಪಂಚಾಯತಿಗಳಿಗೆ ಸದ್ಯಕ್ಕೆ ಚುನಾವಣೆ ನಡೆಯುತ್ತಿಲ್ಲ ಎಂದು ತಿಳಿಸಿದರು.
ತಾಲೂಕುವಾರು ವಿವರ: ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯತಿಗಳ ಪೈಕಿ 32 ಗ್ರಾಮ ಪಂಚಾಯತಿಗಳ 166 ಕ್ಷೇತ್ರಗಳಿಗೆ( ಆಲದಕಟ್ಟಿ ಗ್ರಾ.ಪಂ.ಹೊರತುಪಡಿಸಿ), ಬ್ಯಾಡಗಿ ತಾಲೂಕಿನ 21 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳ 83 ಕ್ಷೇತ್ರಗಳಿಗೆ(ತಡಸ, ಕಾಗಿನೆಲೆ, ಕೆರವಡಿ ಗ್ರಾ.ಪಂ.ಹೊರತುಪಡಿಸಿ), ರಾಣೇಬೆನ್ನೂರು ತಾಲೂಕಿನ 40 ಗ್ರಾಮ ಪಂಚಾಯತಿಗಳ ಪೈಕಿ 33 ಗ್ರಾಮ ಪಂಚಾಯತಿಗಳ 182 ಕ್ಷೇತ್ರಗಳಿಗೆ(ಅಂತರವಳ್ಳಿ, ಕುಪ್ಪೇಲೂರ, ಬಿಲ್ಲಹಳ್ಳಿ, ಮಾಳನಾಯಕನಹಳ್ಳಿ, ಸುಣಕಲ್ಲಬಿದರಿ, ತುಮ್ಮಿನಕಟ್ಟಿ, ಯೋಯಿಸರಹರಳಹಳ್ಳಿ ಗ್ರಾ.ಪಂ. ಹೊರತುಪಡಿಸಿ), ರಟ್ಟೀಹಳ್ಳಿ ತಾಲೂಕಿನ 19 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳ 86 ಕ್ಷೇತ್ರಗಳಿಗೆ(ಕುಡುಪಲಿ ಗ್ರಾ.ಪಂ. ಹೊರತುಪಡಿಸಿ), ಹಾನಗಲ್ ತಾಲೂಕಿನ 42 ಗ್ರಾಮ ಪಂಚಾಯತಿಗಳ ಪೈಕಿ 39 ಗ್ರಾಮ ಪಂಚಾಯತಿಗಳ 202 ಕ್ಷೇತ್ರಗಳಿಗೆ(ಹುಲ್ಲತ್ತಿ, ಹಾವಣಗಿ, ಕೂಡಲ ಗ್ರಾ.ಪಂ.ಹೊರತುಪಡಿಸಿ), ಶಿಗ್ಗಾಂವ ತಾಲೂಕಿನ 28 ಗ್ರಾಮ ಪಂಚಾಯತಿಗಳ ಪೈಕಿ 27 ಗ್ರಾಮ ಪಂಚಾಯತಿಗಳ 120 ಕ್ಷೇತ್ರಗಳಿಗೆ(ಹನುಮರಹಳ್ಳಿ ಗ್ರಾ.ಪಂ.ಹೊರತುಪಡಿಸಿ) ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯದ ತಾಲೂಕು ವಿವರ: ಹಿರೇಕೆರೂರು ತಾಲೂಕಿನ 19 ಗ್ರಾಮ ಪಂಚಾಯತಿಗಳ 94 ಕ್ಷೇತ್ರಗಳಿಗೆ ಹಾಗೂ ಸವಣೂರು ತಾಲೂಕಿನ 21 ಗ್ರಾಮ ಪಂಚಾಯತಿಗಳ 112 ಕ್ಷೇತ್ರಗಳಿಗೆ ಚುನಾವಣೆ ಸಧ್ಯ ನಡೆಯುವುದಿಲ್ಲ ಎಂದು ತಿಳಿಸಿದರು.
ಸಿದ್ಧತೆ: ಪ್ರತಿ ಗ್ರಾಮ ಪಂಚಾಯತಿಗೆ ಓರ್ವ ಚುನಾವಣಾಧಿಕಾರಿ ಹಾಗೂ ಓರ್ವ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುವುದು. ದಿನಾಂಕ 07-02-2020 ರಂದು ಪ್ರಕಟವಾದ ವಿಧಾನಸಭಾ ಅಂತಿಮ ಮತದಾರರಪಟ್ಟಿಗಳನ್ನು ಆಧರಿಸಿ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಲಾಗುವುದು ಎಂದು ಹೇಳಿದರು.
ಹೊಸದಾಗಿ ಮತದಾರರನ್ನು ಸೇರ್ಪಡೆ ಮಾಡುವ ಸಂದರ್ಭದಲ್ಲಿ ನಗರ ಪ್ರದೇಶದ ಮತದಾರರು ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗದಂತೆ ಹಾಗೂ ವಿನಾಕಾರಣ ವಾಡರ್ಿನಿಂದ ವಾಡರ್ಿಗೆ ಸ್ಥಳಾಂತರ ಹೊಂದದಂತೆ ಎಚ್ಚರಿಕೆ ಹಿಸುವಂತೆ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪ್ರತಿಯೊಂದು ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮತಗಟ್ಟೆ ಸ್ಥಾಪಿಸಲಾಗುವುದು ಹಾಗೂ ಮತದಾರರ ಸಂಖ್ಯೆ 1400ಕ್ಕೂ ಅಧಿಕವಿದ್ದಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುವುದು. ಕಳೆದ ಚುನಾವಣೆಯಲ್ಲಿ 1111 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಇರುವುದಿಲ್ಲ ಎಂದು ತಿಳಿಸಿದರು.
2015ರಲ್ಲಿ ಸಾರ್ವತ್ರಿಕ ಚುನಾವಣೆಗಳ ನಂತರ ರಚಿಸಲಾದ ರಾಣೇಬೆನ್ನೂರು ತಾಲೂಕಿನ ವೈ.ಟಿ.ಹೊನ್ನತ್ತಿ ಹಾಗೂ ಹಿರೇಕೆರೂರು ತಾಲೂಕಿನ ಚಿಕ್ಕಯಡಚಿ ಗ್ರಾಮ ಪಂಚಾಯತಿಗಳು ಹಾಗೂ ಇದರಿಂದ ಭಾದಿತವಾದ ಪಂಚಾಯತಿಗಳಿಗೆ ಮರುಮೀಸಲಾತಿ ನಿಗದಿಪಡಿಸಲಾಗುವುದು. ಉಳಿದ ಪಂಚಾಯತಿಗಳಿಗೆ ಕಳೆದ ಬಾರಿಯ ಮೀಸಲಾತಿಯೇ ಇನ್ನೊಂದು ಅವಧಿಗೆ ಮುಂದುವರಿಯಲಿದ್ದು ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದರು.
ಘೋಷಣೆ ಬಾಕಿ: ಆಯೋಗ ಗ್ರಾಮ ಫಮಚಾಯತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಅದೇ ದಿನದಿಂದ ಮಧ್ಯಮಾರಾಟ ನಿಷೇಧವೂ ಜಾರಿಗೆ ಬರಲಿದೆ. ಚುನಾವಣೆ ಮುಗಿದ ನಂತರ ಅವಧಿ ಮುಗಿಯದ ಗ್ರಾಮ ಪಂಚಾಯತಿಗಳನ್ನೂ ಒಳಗೊಂಡಂತೆ ಎಲ್ಲ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಸಕರ್ಾರದ ಅಧಿಸೂಚನೆಯನ್ವಯ ಪಾಲನೆಮಾಡಲಾಗುವುದು ಎಂದು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಚುನಾವಣಾ ತಹಶಿಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು.