ವಿಪ್ರ ಮಹಿಳಾ ಮಂಡಳದಿಂದ ಪ್ರತಿಭಾ ಪುರಸ್ಕಾರ

ವಿಪ್ರ ಮಹಿಳಾ ಮಂಡಳದಿಂದ ಪ್ರತಿಭಾ ಪುರಸ್ಕಾರ  Pratibha Award from Vipra Mahila Mandal

ಬೆಳಗಾವಿ 29: ವಿದ್ಯಾರ್ಥಿಗಳು ಮುಂದೆ ತಮ್ಮ ಜೀವನದಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಡಾ. ನೀತಾ ರಾವ ಹೇಳಿದರು. 

ವಿಪ್ರ ಮಹಿಳಾ ಮಂಡಳದಿಂದ ಸತ್ಯಪ್ರಮೋದ ಸಭಾಗೃಹದಲ್ಲಿ ದಿ. 28 ರಂದು ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಭಗವದ್ಗೀತೆಯ ಮಹತ್ವ ಹಾಗೂ ಅದನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂದು ಡಾ. ನೀತಾ ರಾವ ಅವರು ಹೇಳಿದರು. 

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ತೇರ್ಗಡೆಯಾದ ವಿಪ್ರ ಸಮಾಜದ 16 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕಾರ ನೀಡಲಾಯಿತು. 

ಮಾಧುರಿ ಇನಾಮದಾರ  ಭಗವದ್ಗೀತೆಯ ಎರಡನೇ ಅಧ್ಯಾಯ ಹೇಳಿದರು. ಶೀತಲ ರಾಜಪುರೋಹಿತ ಅವರ ಅರ್ಥ ವಿವರಣೆ ಮಾಡಿದರು. ವೀಣಾ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೇಧಾ ಕುಲಕರ್ಣಿ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿಗಳ ಪರಿಚಯ ಹಾಗೂ ಸನ್ಮಾನವನ್ನು ಹೇಮಾ ಕುಲಕರ್ಣಿ ಹಾಗೂ ವೈಶಾಲಿ ಕುಲಕರ್ಣಿ ನೆರವೇರಿಸಿದರು. 

ಪಾಲಕರು ಹಾಗೂ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಭಾಗ್ಯಶ್ರೀ ಕುಲಕರ್ಣಿ ವಂದಿಸಿದರು. ಅಶ್ವಿನಿ ಜೋಶಿ ಕಾರ್ಯಕ್ರಮ ನಿರೂಪಿಸಿದರು.