ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರ ಪ್ರತಿಭಟನೆ
ಲೋಕದರ್ಶನವರದಿ
ರಾಣಿಬೆನ್ನೂರ:8 ಕೇಂದ್ರ ಸಕರ್ಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹಾಗೂ ಕಾಮರ್ಿಕ ವಿರೋಧಿ ನೀತಿ ಖಂಡಿಸಿ, ಸ್ಥಳೀಯ ಅಂಚೆ ಇಲಾಖೆಯ ನೌಕರರು ಕರ್ತವ್ಯವನ್ನು ಸ್ಥಗಿತಗೊಳಿಸಿ ಬುಧವಾರದಂದು ಅಂಚೆ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ನಿವೃತ್ತ ಪೋಸ್ಟ್ ಮಾಸ್ತರ್ ವಿ.ಆರ್.ಜೋಷಿ ಮಾತನಾಡಿ, ಕೇಂದ್ರ ಸಕರ್ಾರದ ನೌಕರರ ಹಳೆ ಪಿಂಚಣೆ ಪದ್ಧತಿಯನ್ನು ತುತರ್ಾಗಿ ಜಾರಿಗೊಳಿಸಬೇಕು. ಎಲ್ಲಾ ನೌಕರರಿಗೆ ಕನಿಷ್ಟ ವೇತನ ಫಿಟ್ಮೆಂಟ್ ರೂಪದಲ್ಲಿ ನೀಡಬೇಕೆಂದು ಆಗ್ರಹಿಸಿದರು.
ಜಿಡಿಎಸ್ ಮತ್ತು ಕಾಂಟ್ರ್ಯಾಕ್ಟ್ ಸಾಂಧಭರ್ಿಕ ಕಾಮರ್ಿಕರುಗಳನ್ನು ಖಾಯಂಗೊಳಿಸಬೇಕು. ಅಂಚೆ ಇಲಾಖೆ ಉಧ್ಯೋಗಿಗಳಿಗೆ 5 ದಿನಗಳ ವಾರ ಭದ್ರತೆ, 10 ಪಾಯಿಂಟ್ ಕಾನ್ಪಿಡರೇಷನ್ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸಕರ್ಾರವು ಮುಂದಾಗಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಕರ್ಾರವು ಕೇಂದ್ರದ ವ್ಯಾಪ್ತಿಯಲ್ಲಿನ ಅನೇಕ ಇಲಾಖೆಗಳನ್ನು ಖಾಸಗೀಕರಣ ಮಾಡಿದರೆ, ನೌಕರರಿಗೆ ಸೂಕ್ತ ಭದ್ರತೆ ಇಲ್ಲದಂತಾಗುತ್ತದೆ. ಮತ್ತು ಉತ್ತಮವಾದ ಸೇವೆ ನೀಡಲು ನೌಕಕರಿಗೆ ಕಷ್ಟಕರವಾಗುತ್ತದೆ ಎಂದು ಜೋಷಿ ಆರೋಪಿಸಿದರು. ಪ್ರತಿಭಟನೆಯಲ್ಲಿ ವಿರೇಶ್ ಶಿಡಗನಾಳ, ಗೋಪಾಲ್ ಲಮಾಣಿ, ನರಸಿಂಹ ಮೂತರ್ಿ ಶಿರಹಟ್ಟಿ, ರಮೇಶ ಅಬ್ಬಿಗೇರಿ, ಶಾಂತಪ್ಪ ಮಡಿವಾಳರ, ಪುಟ್ಟರಾಜ್ ಗೊಡ್ಡೆಮ್ಮಿ, ಛಾಯಾ ಜಡೇಕರ, ರೇವಣೆಪ್ಪ ಕಮದೋಡ, ದೇವೆಂದ್ರಪ್ಪ ನಾಯಕ್, ವಿನೋದ ಮುತಾಲಿಕ್, ಹೆಚ್.ಡಿ.ಕಟ್ಟಿ, ಕೆ.ಎಸ್.ಮಳಿಮಠ, ಬಿ.ಯು. ಹಿತ್ತಲಮನಿ, ಶ್ರೀಧರ, ಪಿ.ವಿ.ಪೂಜಾರ, ಸಿ,ಎನ್.ಹೆಗಡಾಳ, ನಾಗರಾಜ್ ಗುರುಂ, ಎಸ್.ಎಸ್.ರಾಮಪ್ಪ, ಲೊಕೇಶ್ ನಾಯಕ್ ಸೇರಿದಂತೆ ಅಂಚೆ ಇಲಾಖೆ ಮತ್ತು ಬಿಎಸ್ಎನ್ಎಲ್ ನೌಕರರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 