ಬಡ ಮಕ್ಕಳು ಸಮಾಜವನ್ನು ತಿದ್ದುವ ವ್ಯಕ್ತಿಗಳಾಗಬೇಕು: ತೇರದಾಳ
Poor children should become reformers of society: Teradal
ಜಮಖಂಡಿ 17: ಶಿಕ್ಷಣ ಕಲಿತ ಬಡ ಮಕ್ಕಳು ಉನ್ನತ ಅಧಿಕಾರಿಗಳಾಗಿ ಸಮಾಜವನ್ನು ತಿದ್ದುವ ವ್ಯಕ್ತಿಗಳು ಆಗಬೇಕೆಂದು ಚಲವಾದಿ ಮಹಾಸಭಾ ಅಧ್ಯಕ್ಷ ಶಶಿಕಾಂತ ತೇರದಾಳ ಹೇಳಿದರು.
ನಗರದ ಎಪಿಎಂಸಿ ಯಾರ್ಡನಲ್ಲಿ ನಡೆದ ಸು ಸಂಸ್ಕೃತಿ ಸಂಸ್ಕಾರ ಸೇವಾ ಮಂಚ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಅನಾಥ, ಪ್ರತಿಭಾವಂತ, ಬಡ ಮಕ್ಕಳನ್ನು ಗುರುತಿಸಿ ಶಾಲೆಯ ಕಲಿಕೆಯ ಪಠ್ಯ ಪುಸ್ತಕಗಳಾದ 2 ಪೆನ್ನುಗಳ ಬಾಕ್ಸ್, 12 ನೋಟಬುಕ್ಸ್ಗಳು, 2 ಪೇಪರ್ ಪ್ಯಾಡ್ಗಳ ಸಲರಕಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಎಂಬುವದು ಹುಲಿಯ ಹಾಲು ಇದಂತೆ. ಶಿಕ್ಷಣ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನವನ್ನು ರೂಪಿಸಿಕೊಳ್ಳಬಹುದು. ಹಣ, ಆಸ್ತಿ, ಅಂತಸ್ತುಗಳನ್ನು ಯಾರಾದರು ಕಸಿದ್ದುಕೊಳ್ಳಬಹುದು. ಆದರೆ ವಿದ್ಯೆಯನ್ನು ಯಾರು ಕಸಿದ್ದುಕೊಳ್ಳಲು ಸಾಧ್ಯವಿಲ್ಲ. ಈ ಸಂಸ್ಥೆಯ ಸಹಾಯ, ಸಹಕಾರದಿಂದ ಬಡಮಕ್ಕಳಿಗೆ ಶಿಕ್ಷಣ ಕಲಿಯಲು ಬಹಳ ಅನುಕೂಲತೆ ಆಗುತ್ತದೆ. ಇಂತಹ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
ಸಂಸ್ಥ ಅಧ್ಯಕ್ಷ ಪಾರ್ಶ್ವನಾಥ ಉಪಾಧ್ಯೆ ಮಾತನಾಡಿ, ನಮ್ಮ ಸಂಸ್ಥೆಯು ಸುಮಾರು ವರ್ಷಗಳ ಕಾಲದಿಂದ ಬಡ, ಅನಾಥ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಾಗಿರುವ ಪುಸ್ತಕಗಳು, ಪೆನ್ನು, ನೋಟಬುಕ್ಸ್ಗಳು, ಪೇಪರ ಪ್ಯಾಡ್ಗಳನ್ನು ನೀಡುವ ಜೊತೆಗೆ ಸಹಾಯ ಧನವನ್ನು ನೀಡಲಾಗುತ್ತದೆ. ಇಂದಿನ ಮಕ್ಕಳು ಮುಂದಿನ ದೇಶವನ್ನು ಆಳುವ ಉತ್ತಮ ಪ್ರಜೆಗಳಾಗಬೇಕೆಂದು ಎಂದರು.
ಅಂಬೇಡ್ಕರ್ ಸಂಘಟನೆ ಅಧ್ಯಕ್ಷ ರವಿ ದೊಡಮನಿ ಮಾತನಾಡಿದರು, ಗಣಿ ಗ್ರಾಮದ ತಾಯಿಯನ್ನು ಕಳೆದಕೊಂಡ 8ನೇ ತರಗತಿ ವಿದ್ಯಾರ್ಥಿ ಸಮರ್ಥ ಸದಾಶಿವ ಮೇತ್ರಿ, ಹಾಗೂ 6ನೇ ತರಗತಿ ವಿದ್ಯಾರ್ಥಿ ಶ್ರಾವಣ ಸದಾಶಿವ ಮೇತ್ರಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಮಂಜು ಬಿ,ಕೆ, ಸದಾಶಿವ ಮೇತ್ರಿ, ಗಜಾನಂದ ಕಾಂಬಳೆ, ಅಶೋಕ ಕಾಂಬಳೆ ಸೇರಿದಂತೆ ಸಂಸ್ಥೆಯವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 