ಭಾರತದ ಗುಪ್ತಚರ ಸಂಸ್ಥೆಯಿಂದ ನನ್ನ ಹತ್ಯೆಗೆ ಸಂಚು: ಶ್ರೀಲಂಕಾ ಅಧ್ಯಕ್ಷರ ಡ್ಯಾಮೇಜಿಂಗ್ ಸ್ಟೇಟ್ಮೆಂಟ್
ಚೆನ್ನೈ 17: ನಾಯಕರ ಹತ್ಯೆ, ಭಯೋತ್ಪಾದನೆ
ಕೃತ್ಯಕ್ಕೆ ಪಿತೂರಿ ಇತ್ಯಾದಿ ಆಪಾದನೆಗಳೆಲ್ಲಾ ಪಾಕಿಸ್ತಾನದ ಐಎಸ್ಐ ಮೇಲೆ ಇರುವುದು ಸಾಮಾನ್ಯ. ಈಗ
ಭಾರತದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಗುಪ್ತಚರ ಸಂಸ್ಥೆಯ ಮೇಲೂ ಇಂಥ ಗಂಭೀರ ಆರೋಪ ಬಂದಿದೆ.
ನೆರೆಯ ಶ್ರೀಲಂಕಾ ದೇಶದ ಅಧ್ಯಕ್ಷರ ಮೈತ್ರಿಪಾಲ ಸಿರಿಸೇನ ಇಂಥದ್ದೊಂದು ಆಪಾದನೆ ಮಾಡಿದ್ಧಾರೆಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ತನ್ನ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದ ವೇಳೆ ಸಿರಿಸೇನಾ, ಭಾರತದ ರಾ ಸಂಸ್ಥೆಯಿಂದ ತನ್ನ
ಹತ್ಯೆಗೆ ಪ್ರಯತ್ನವಾಗಿತ್ತು ಎಂದು ತಿಳಿಸಿದ್ದರು. ಅವರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ
ಈ ಸಂಚಿನ ಅರಿವಿಲ್ಲದೇ ಇರಬಹುದು ಎಂದು ಹೇಳಿರುವ ಮಾಹಿತಿ ತನಗೆ ಲಭಿಸಿದೆ ಎಂದು ದಿ ಹಿಂದೂ ಪತ್ರಿಕೆಯ
ವರದಿಯಲ್ಲಿ ತಿಳಿಸಲಾಗಿದೆ.
ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಭಾರತದ ಪತ್ರಿಕೆಗೆ ಈ ಮಾಹಿತಿ ನೀಡಿದ್ದಾರೆ. ಆದರೆ,
ಶ್ರೀಲಂಕಾ ಅಧ್ಯಕ್ಷರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕಳೆದ ತಿಂಗಳಷ್ಟೇ ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ದಳದ ನಮಲ್ ಕುಮಾರ ಎಂಬುವವರು ಶ್ರೀಲಂಕಾ ಅಧ್ಯಕ್ಷ
ಸಿರಿಸೇನಾ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ ಗೋತಬಾಯ ರಾಜಪಕ್ಸ ಅವರ ಹತ್ಯೆಗೆ ಸಂಚು ನಡೆದಿರುವ ಮಾಹಿತಿ
ತನ್ನ ಬಳಿ ಇದೆ ಎಂದು ಹೇಳಿದ್ದ. ಇದೀಗ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾ ಸಂಸ್ಥೆಯತ್ತಲೇ
ನೇರವಾಗಿ ಬೊಟ್ಟು ಮಾಡಿರುವುದು ಗಮನಾರ್ಹ.
ಎಲ್ಟಿಟಿಇ ಕಾಲದಿಂದಲೂ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಅಷ್ಟಕಷ್ಟೇ. ಶ್ರೀಲಂಕಾದಲ್ಲಿನ ಹಲವು
ದುರ್ಘಟನೆಗಳಿಗೆ ಭಾರತದ ಕೈವಾಡ ಇದೆ ಎಂದು ಹಲವು ಬಾರಿ ಆಪಾದನೆಗಳು ಬಂದಿವೆ. 2015ರಲ್ಲಿ ಅಂದಿನ ಅಧ್ಯಕ್ಷ
ಮಹಿಂದಾ ರಾಜಪಕ್ಸ ಅವರು ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದಾಗ ಭಾರತದ ರಾ ಸಂಸ್ಥೆಯತ್ತಲೇ ಸಂಶಯ
ವ್ಯಕ್ತಪಡಿಸಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 