ಶಿಗ್ಗಾವಿ 16: ಪ್ರತಿಯೊಬ್ಬರು ಮನೆಗೆ ಒಂದರಂತೆ ನಿಮಗೆ ಇಷ್ಟವಾದ ಗಿಡ ನೀಡುವುದರಿಂದ ಮುಂದಿನ ನಮ್ಮ ಮಕ್ಕಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಬಹುದು ಎಂದು ಹೆಸ್ಕಾಂ ಅಧ್ಯಕ್ಷ ಸೈಯದ ಅಜ್ಜಂಪೀರ ಖಾದ್ರಿ ಹೇಳಿದರು. ಪಟ್ಟಣದ 5 ನೇ ವಾರ್ಡನಲ್ಲಿ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಪ್ರತಿ ವರ್ಷ ಬೇರೆ, ಬೇರೆ ಧೈಯ ವಾಕ್ಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತದೆ.ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲಿ ಜಾಗೃತಿ ಮೂಡಿಸುವುದು ಮತ್ತು ಪರಿಸರ ಹಾಳು ಮಾಡದಂತೆ ತಡೆಯುವುದಾಗಿದೆ ತಿಳಿಸಿದರು.
ಈ ಸಂದರ್ಭದಲ್ಲಿ ಭಾವನಮಠ ಸಾಧುಮಹಾರಾಜ ಕಾಳೆ, ಬಂಕಾಪೂರದ ಕುತುಬೇ ಅಲಂಖಾದ್ರೀ, ವಾರ್ಡ ಪುರಸಭೆ ಸದಸ್ಯೆ ನಸ್ರೀನಬಾನು ತಿಮ್ಮಾಪೂರ, ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ, ಕಾರ್ಮಿಕ ವಿಕಾಸ ವೇದಿಕೆ ಅಧ್ಯಕ್ಷ ಇಮಾಮಹುಸೇನ ಅದಂಬಾಯಿ, ಸುಭಾಸ ಕಾಳೆ, ಅಜಾಧ್ ಜಮಾಧಾರ, ಮಹ್ಮದಹುಸೇನ ಧಾರವಾಡ, ಮಹ್ಮದಗೌಸ ಸವಣೂರ, ಶಿಕ್ಷಕರಾದ ಬಸವರಾಜ ಬಸರೀಕಟ್ಟಿ, ಚರಂತಿಮಠ, ವಿದ್ಯಾವತಿ ಹೂಗಾರ, ನಾಗರಾಜ ಹುಲೇಕಲ್, ಭರತಕುಮಾರ ಕಳ್ಳಿಮನಿ, ಭಾರತಿ ಹೂಗಾರ, ಬಸವರಾಜ ಮಮದಾಪೂರ, ಮೋಹನ ಹಿರೂಲಾಲ ಸೇರಿದಂತೆ ಉರ್ದು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಜಿಲಾನಿ ಜಂಗ್ಲಿ ಕಾರ್ಯಕ್ರಮ ನಿರ್ವಹಿಸಿದರು.