ಕಳ್ಳಬಟ್ಟಿ ಸರಾಯಿ ಮಾರಾಟಗಾರರ ಬಂದನ
ಲೋಕದರ್ಶನ ವರದಿ
ಯರಗಟ್ಟಿ 19: ಮಾನ್ಯ ಅಬಕಾರಿ ಉಪ ಅಧಿಕ್ಷರು ರಾಮದುರ್ಗ ನೇತ್ರತ್ವದಲ್ಲಿ ಸವದತ್ತಿ ವಲಯ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಖಚಿತ ಮಾಹಿತಿ ಪಡೆದು ಕಳ್ಳಬಟ್ಟಿ ಸರಾಯಿ ಮಾರುತ್ತಿದ್ದ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ಪಾರ್ವತಿ ರಮೇಶ ಲಮಾಣಿ ಆರೋಪಿಯನ್ನು ಅ.18 ರಂದು ದಾಳಿ ಮಾಡಿದಾಗ ಸುಮಾರು ನಾಲ್ಕು ಲೀಟರ್ ಕಳ್ಳಬಟ್ಟಿ ಸರಾಯಿ ಸಿಕ್ಕದೆ ಹಾಗೂ ಅ.19 ರಂದು ಮತ್ತೆ ದಾಳಿ ಮಾಡಿದಾಗ ಅದೇ ಗ್ರಾಮದ ರಾಮಪ್ಪ ದುರಗಪ್ಪ ಪೂಜಾರಿ ಎಂಬಾತನಲ್ಲಿ ಎರಡು ಲೀಟರ್ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡಲು ಸಂಗ್ರಹಿಸಿಟ್ಟಾಗ ಸಿಕ್ಕಿದ್ದು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನಿರೀಕ್ಷಕ ರವಿ.ಎಮ್.ಮರಿಗೌಡರ, ಉಪ ನಿರೀಕ್ಷಕ ಆರ್.ಜಿ.ಆರೆನ್ನವರ, ಸಿಬ್ಬಂದಿಗಳಾದ ಸಂತೋಷ ಸಂಜೀವಪ್ಪನವರ, ಬಿ.ಬಿ.ಸುಣಗಾರ, ಎಸ್.ಜಿ.ತಳವಾರ, ಕಿರಣ ತೆರದಾಳ, ಅಬಕಾರಿ ರಕ್ಷಕಿಯರಾದ ಎಸ್.ಡಿ.ಕಮಲಾಪೂರ, ಪ್ರಿಯಂಕಾ ಗಲಬಿ ಪ್ರಕರಣ ಬೇದಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 