ವ್ಯಕ್ತಿ ಕಾಣೆ
ಲೋಕದರ್ಶನ ವರದಿ
ಬ್ಯಾಡಗಿ01: ಪಟ್ಟಣದ ವಾಲ್ಮೀಕಿ ನಗರದ ವಿವಾಹಿತನೊಬ್ಬ ಶಿಶುನಾಳದ ಗ್ರಾಮಕ್ಕೆ ಹೋಗಿ ಬರುವುದಾಗಿ ತನ್ನ ಮನೆಯಿಂದ ಹೊರ ಹೋದವನು ಇಲ್ಲಿಯವರೆಗೂ ತನ್ನ ಮನೆಗೆ ತಿರುಗಿ ಬಾರದೇ ಕಾಣೆಯಾದ ಘಟನೆ ಜರುಗಿದೆ.
ಕಾಣೆಯಾಗಿರುವನನ್ನು ದುಗ್ಗಪ್ಪ ಈರಪ್ಪ ಒದ್ದಟ್ಟಿ(48) ಎಂದು ಗುತರ್ಿಸಲಾಗಿದೆ. ಇವರು ಜೂ.10 ರಂದು ಮುಂಜಾನೆ 10 ಘಂಟೆಯ ಸುಮಾರಿಗೆ ತನ್ನ ಮನೆಯಿಂದ ಪ್ರತಿ ಅಮವಾಸ್ಯೆಗೆ ಶಿಶುನಾಳ ಗ್ರಾಮಕ್ಕೆ ಹೋಗುವ ರೂಢಿಯಂತೆ ಹೊರ ಹೋದವನು ಇಲ್ಲಿಯವರೆಗೂ ತನ್ನ ಮನೆಗೆ ಬಾರದೇ ಕಾಣೆಯಾಗಿದ್ದಾನೆ, ಅಲ್ಲದೇ ಈತನಿಗೆ ಗಾಂಜಾ ಸೇದುವ ಅಭ್ಯಾಸವಿತ್ತೆಂದು ಅವನ ಹೆಂಡತಿ ಬ್ಯಾಡಗಿ ಪೋಲಿಸ್ ಠಾಣೆಯಲ್ಲಿ, ದೂರು ಸಲ್ಲಿಸಿ ತನ್ನ ಗಂಡನನ್ನು ಹುಡಿಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸ್ಥಳೀಯ ಪೋಲಿಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
ಕಾಣೆಯಾಗಿರುವ ದುಗ್ಗಪ್ಪ ಈರಪ್ಪ ಒದ್ದಟ್ಟಿ ಮನೆ ಬಿಡುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ, ಬಿಳಿ ಬಣ್ಣದ ಲುಂಗಿಯನ್ನು ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. 5 ಪುಟ 3 ಇಂಚು ಎತ್ತರವಿದ್ದು, ಸಾದಗಪ್ಪು ಮೈಬಣ್ಣ, ಕೋಲುಮುಖ, ಉದ್ದನೇ ಮೂಗು, ದಪ್ಪ ಮೀಸೆ ಸಪೂರ ಮೈಕಟ್ಟು, 2 ಇಂಚು ಉದ್ದನೇ ಕಪ್ಪು ಬಿಳಿ ಮಿಶ್ರೀತ ಬಣ್ಣದ ಕೂದಲು ಹೊಂದಿದ್ದಾನೆ. ಈ ವ್ಯಕ್ತಿ ಯಾರಿಗಾದರೂ ಕಂಡು ಬಂದಲ್ಲಿ ಬ್ಯಾಡಗಿ ಪೋಲಿಸ್ ಠಾಣೆ ನಂಬರ 08375-226633 ಇಲ್ಲವೆ ಹಾವೇರಿಯ ಕಂಟ್ರೋಲ್ ರೂಂ. ನಂಬರ 08375-100 ನಂಬರಿಗೆ ಸಂಪಕರ್ಿಸುವಂತೆ ಕೋರಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 