ಪಂಪಯ್ಯಸ್ವಾಮಿ ಅವರಿಗೆ ಗ್ರೀನ್ ಹೀರೋ ಪ್ರಶಸ್ತಿ
ಲೋಕದರ್ಶನವರದಿ
ಹೊಸಪೇಟೆ15: ಖ್ಯಾತ ವನ್ಯಜೀವಿ ಛಾಯಾಗ್ರಾಹಕ, ಪರಿಸರ ಸಂರಕ್ಷಕ, ವನ್ಯಜೀವಿ ಮಾರ್ಗದರ್ಶಕ ಕಮಲಾಪುರದ ಪಂಪಯ್ಯಸ್ವಾಮಿ ಮಳೆಮಠ ಅವರಿಗೆ ಬೆಂಗಳೂರಿನ ವೃಕ್ಷಮಿತ್ರ ಪೌಂಡೇಶನ್ ನ ' ಗ್ರೀನ್ ಹೀರೋ ' ಪ್ರಶಸ್ತಿ ಲಭ್ಯವಾಗಿದೆ.
ಬೆಂಗಳೂರಿನ ಜಯನಗರದ ಎಸ್.ಎಸ್ ಎಂಆರ್,ವಿ ಕಾಲೇಜಿನ ಆವರಣದಲ್ಲಿ ನಡೆದ ಪೌಂಡೇಶನ್ ನ ಸಮಾರಂಭದಲ್ಲಿ ನಿವೃತ್ತ ಮುಖ್ಯ ನ್ಯಾಯಾಧೀಶ ಎಂ.ಎನ್. ವೆಂಕಟಚಲಯ್ಯ ಅವರು ಈ ಪ್ರಶಸ್ತಿಯನ್ನು ಕೊಡಮಾಡಿದರು.
ಇವರೊಂದಿಗೆ ನಾಡಿನ ವಿವಿಧೆಡೆ ಪರಿಸರ ಕ್ಷೇತ್ರದಲ್ಲಿ ಸಾಧನೆಗೈಯ್ದ 9 ಜನರಿಗೂ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ವೃಕ್ಷ ಪೌಂಡೇಶನ್ ಸಂಸ್ಥಾಪಕ ಟ್ರೀ ಡಾಕ್ಟರ್ ವಿಜಯ್ ನಿಶಾಂತ್ ಎಸ್.ಎಸ್.ಎಂ.ಆರ್.ವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಅನಿಲ್ ಕುಮಾರ್, ಸಮರ್ಥ ಭಾರತದ ಕೃಷ್ಣೇಗೌಡ, ಪಟ್ಟಾಭಿರಾಮ ನಗರದ ಕಾಪರ್ೋರೇಟರ್ ಶ್ರೀಮತಿ ನಾಗರತ್ನ ರಾಮಮೂತರ್ಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ, ಬಿ.ಬಿ.ಎಂಪಿಯ ಮೇಯರ್ ಗಂಗಾಂಬಿಕೆ ಮಲ್ಲಿಕಾಜರ್ುನ ಉಪಸ್ಥಿತರಿದ್ದರು.
ಪಂಪಯ್ಯಸ್ವಾಮಿ ಅವರ ಒಟ್ಟು ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 