ಬದಲಾವಣೆಗಾಗಿ ರಾಜಕೀಯಕ್ಕೆ ಎಂಟ್ರಿ: ನಟ ರಜನಿ ಸ್ಪಷ್ಟಣೆ
ಚೆನ್ನೈ ಮಾ 12,ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ, ಸುಧಾರಣೆ ತರಲು ರಾಜಕೀಯಕ್ಕೆ ಬರುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಪ್ರಕಟಿದ್ದಾರೆ. ಶೀಘ್ರದಲ್ಲೇ ಹೊಸ ಪಕ್ಷದ ಹೆಸರು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಚೆನ್ನೈನ ಲೀಲಾಪ್ಯಾಲೇಸ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996 ರಿಂದಲೂ ರಾಜಕೀಯದಲ್ಲಿ ನನ್ನ ಹೆಸರು ಕೇಳಿ ಬಂದಿತ್ತು.ತಮಿಳುನಾಡಿಗೆ ಏನಾದರೂ ಕೊಡುಗೆ , ಕಾಣಿಕೆ ನೀಡುವ ಆಸೆಯಿದೆ. ಸಮಾಜ, ಜನರ ಮನಸ್ಥಿತಿ ಬದಲಾಯಿಸುತ್ತೇನೆ ಎಂದು ಅವರು ದೃಢವಾಗಿ ಹೇಳಿದರು. ತಮಿಳುನಾಡಿನಲ್ಲಿ ಎರಡು ದೊಡ್ಡ ರಾಜಕೀಯ ಪಕ್ಷಗಳಿವೆ. ಇದೀಗ ಈ ಎರಡು ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ತಮಿಳುನಾಡು ರಾಜಕೀಯವನ್ನು ಹತ್ತಿರದಿಂದ ಕಂಡಿದ್ದೇನೆ. ಜನರ ನಿರೀಕ್ಷೆಯಂತೆ ರಾಜ್ಯದಲ್ಲಿ ಬದಲಾವಣೆ ಬಯಸಿ ರಾಜಕೀಯಕ್ಕೆ ಬರುತ್ತಿದ್ದೇನೆಯೇ ಹೊರತು ಸಿಎಂ ಆಗಿ ಮೆರೆಯಬೇಕು ಎಂಬ ಕಾರಣದಿಂದ ಅಲ್ಲ ಎಂದರು ನನ್ನ ಹೊಸ ಪಕ್ಷದಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.ನನಗೆ ಸಿಎಂ ಆಗುವ ಅಸೆ ಇಲ್ಲ, ನಾನು ಪಕ್ಷದ ಮುಖ್ಯಸ್ಥನಾಗಿರುತ್ತೇನೆ. ಸಿಎಂ ಹುದ್ದೆಗೆ ವಿದ್ಯಾವಂತನಾಗಿರಬೇಕು, ಯುವ, ಅನುಭವಿ ಆಡಳಿತಗಾರ ಬೇಕು . ಪಕ್ಷಕ್ಕೆ ಹಣವಂತರು ಬೇಡ, ಗುಣವಂತರು ಬೇಕು ಎಂದೂ ಎಂದು ನಟ ರಜನಿ ಒತ್ತಿ ಹೇಳಿದ್ದಾರೆ .
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 