ಪಿ ಎಂ ಸಿ ಬ್ಯಾಂಕ್ – ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯಲು ಅವಕಾಶ ಅಗತ್ಯ: ನಿರ್ಮಲಾ ಸೀತಾರಾಮನ್
Nirmala Sitharaman
ನವದೆಹಲಿ, ಡಿ 2 -ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್ ನಲ್ಲಿ ಠೇವಣಿ ಇರಿಸಿರುವ ಸಣ್ಣ ಠೇವಣಿದಾರರು ತಮ್ಮ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ ನೀಡಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಿಎಂಸಿ ಬ್ಯಾಂಕ್ ನ ಶೇ 78 ರಷ್ಟು ಹೂಡಿಕೆದಾರರು ತಮ್ಮ ಖಾತೆಯಲ್ಲಿ ಮೊತ್ತ ಹಿಂಪಡೆಯಬಹುದಾಗಿದೆ. ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯುವ ಅವಕಾಶ ನೀಡಬೇಕಿದೆ ಎಂದರು.
ಬಿಜೆಪಿಯ ರಿತಾ ಬಹುಗುಣ ಜೋಷಿ ಮತ್ತು ಜಿ ಎಸ್ ಬಸವರಾಜ್ ಅವರ ಪ್ರಶ್ನೆ ಉತ್ತರಿಸಿದ ಸಚಿವೆ, ಹಣ ಹಿಂಪಡೆಯುವ ಮಿತಿಯ ಮೇಲೆ ನಿಗಾ ವಹಿಸಿದ್ದು ಠೇವಣಿದಾರರ ಹಿತಾಸಕ್ತಿ ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಠೇವಣಿದಾರರ ಅಗತ್ಯ, ಕಷ್ಟ ಕಾರ್ಪಣ್ಯ ಆಧರಿಸಿ ವೈದ್ಯಕೇತರ ಅಗತ್ಯಗಳಿಗಾಗಿ ಒಂದು ಲಕ್ಷ ರೂಪಾಯಿವರೆಗೆ ಹಣ ಹಿಂಪಡೆಯಲು ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ತನ್ನ ಅಧಿಕಾರಿಗಳು ಮತ್ತು ಸಾಲ ಪಡೆದವರ ವಿರುದ್ಧ ಬ್ಯಾಂಕ್ ನೀಡಿರುವ ದೂರು ಆಧರಿಸಿ, ಮಹಾರಾಷ್ಟ್ರ ಪೊಲೀಸರ ಆರ್ಥಿಕ ಅಪರಾಧ ವಿಭಾಗ ತನಿಖೆ ಕೈಗೊಂಡಿದೆ. ವಹಿವಾಟಿನ ಬಗ್ಗೆ ಫಾರೆನ್ಸಿಕ್ ಆಡಿಟರ್ ಗಳನ್ನೂ ನೇಮಕ ಮಾಡಲಾಗಿದೆ ಎಂದು ಲೋಕಸಭೆಗೆ ತಿಳಿಸಲಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 