ಪಿಕೆಪಿಎಸ್: ಜ್ಯೋತಿಕುಮಾರ ಪಾಟೀಲ ಗುಂಪಿಗೆ ಜಯ
ಲೋಕದರ್ಶನ ವರದಿ
ಕಾಗವಾಡ 01: ಸನ್ 1919ರಲ್ಲಿ ಕಾಗವಾಡದ ಗೌಡರಾದ ಭಾವುಸಾಹೇಬ ಪಾಟೀಲ ಇವರು ಪ್ರಾರಂಭಿಸಿದ್ದ ಪಿಕೆಪಿಎಸ್ ಸಂಸ್ಥೆ 101 ವರ್ಷದ ಶತಮಾನೋತ್ಸವ ಪೂರ್ಣಗೊಳಿಸಿದ್ದು. ಆಡಳಿತ ಮಂಡಳೀಯ ಚುನಾವಣೆಯಲ್ಲಿ ಅವರ ಮರಿಮಗ ಜ್ಯೋತಿಕುಮಾರ ಸಿದ್ದಗೌಡಾ ಪಾಟೀಲ ಇವರ ನೇತೃತ್ವದ ಗುಂಪಿಗೆ ಬಹುಮತ ಲಭಿಸಿದೆ.
ಶುಕ್ರವಾರ ರಂದು ಮತಚಲಾಯಿಸಿ ತಡರಾತ್ರಿ ಫಲಿತಾಂಶ ಲಭಿಸಿದೆ. ಇದರಲ್ಲಿ ಜ್ಯೋತಿಕುಮಾರ ಸಿದ್ದಗೌಡಾ ಪಾಟೀಲ ಇವರ ನೇತೃತ್ವದ ಗುಂಪಿಗೆ ಬಹುಮತ ಲಭಿಸಿದೆ. ಈ ಗುಂಪಿಗೆ ಇನ್ನೂಳಿದ ಚುನಾಯಿತಗೊಂಡ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಸದಸ್ಯ ಬಸವರಾಜ ಉಪ್ಪಾರ ಸಂಸ್ಥೆ ಅಭಿವೃದ್ಧಿಗಾಗಿ ಕೈಜೋಡಿಸಿದ್ದಾರೆ.
ಚುನಾವಣೆಯಲ್ಲಿ ಜ್ಯೋತಿಕುಮಾರ ಪಾಟೀಲ, ಚಿನಗೌಡಾ ಪಾಟೀಲ, ಬಸಗೌಡಾ ಪಾಟೀಲ, ಕುಮಾರ ಪೂಜಾರಿ, ಸತ್ಯಗೌಡಾ ಪಾಟೀಲ, ಅನೀಲ ಮಾಳಿ, ಗೌಸ್ ಸೈಯದ್, ಕವೀತಾ ಅನೀಲ ಮಗದುಮ್, ಮಾಲುತಾಯಿ ಅಪ್ಪಾಸಾಹೇಬ ಪೂಜಾರಿ, ಅನೀಲ ಭಜಂತ್ರಿ, ಚುನಾಯಿತಗೊಂಡಿದ್ದು. ಬಸವರಾಜ ಉಪ್ಪಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಸಂಸ್ಥೆಯ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಿದರು.
ಚುನಾವಣೆಯಲ್ಲಿ ಚುನಾಯಿತಗೊಂಡ ಜ್ಯೋತಿಕುಮಾರ ಪಾಟೀಲ ಇವರು ಶತಮಾನೋತ್ಸವ ಪೂರ್ಣಗೊಳಿಸಿದ ಸಂಸ್ಥೆಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಇದು ಹೆಮ್ಮೆಯ ಸಂಗತಿ. ಇದಲ್ಲದೇ ನಮ್ಮ ಮುತ್ತಜ್ಜ್ ಭಾವುಸಾಹೇಬ ಪಾಟೀಲ ನೂರು ವರ್ಷ ಹಿಂದೆ ಸ್ಥಾಪಿಸಿದ್ದ ಸಂಸ್ಥೆಗೆ ಮರಿಮಗನಾದ ನಾನು ಸದಸ್ಯನಾಗಿದ್ದೇನೆ ಇದು ನನ್ನ ಭಾಗ್ಯ. ಈ ಸಂಸ್ಥೆ ಅಭಿವೃದ್ಧಿಗಾಗಿ ಪಕ್ಷ, ಭೇದ ಮರೆತು ಎಲ್ಲರೂ ಶ್ರಮಿಸುತ್ತೇವೆ ಎಂದು ನೂತನ ಸದಸ್ಯ ಹಾಗೂ ರಾಜ್ಯ ಸಕರ್ಾರದಿಂದ "ಅತ್ಯುತ್ತಮ ಕಬ್ಬು ಬೆಳೆಗಾರ ರೈತ"ವೆಂದು ಪ್ರಶಸ್ತಿ ಪಡೆದ ಜ್ಯೊತಿಕುಮಾರ ಪಾಟೀಲ ಹೇಳಿದರು.ಈ ವೇಳೆ ಎಲ್ಲ ಚುನಾಯಿತ ಸದಸ್ಯರು ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 