ನಿಮ್ಮ ಸುರಕ್ಷತೆಗಾಗಿ ನಮ್ಮ ತಂದೆ-ತಾಯಿ ಕರ್ತವ್ಯದಲ್ಲಿದ್ದಾರೆ: ಪೊಲೀಸರ ಮಕ್ಕಳ ಮನವಿ
ಬೆಂಗಳೂರು,
ಮಾ.29, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಈಗಾಗಲೇ ದೇಶವನ್ನೇ
ಲಾಕ್ಡೌನ್ ಮಾಡಲಾಗಿದ್ದು, ಮನೆಯಿಂದ ಯಾರೊಬ್ಬರೂ ಹೊರ ಬರದಂತೆ ಪೊಲೀಸರು ಮನವಿ
ಮಾಡುತ್ತಿದ್ದಾರೆ.ಆದರೆ, ಕೆಲವರು ಲಾಕ್ ಡೌನ್ ಆದೇಶಕ್ಕಾಗಲೀ, ಪೊಲೀಸರ ಮಾತಿಗೂ ಕಿವಿಗೊಡದೆ ಅನಾವಶ್ಯಕವಾಗಿ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ತಮ್ಮ
ಆರೋಗ್ಯವನ್ನು ಬದಿಗಿಟ್ಟು ಕಾರ್ಯನಿರ್ವಹಿಸಲೇ ಬೇಕು. ಆದ್ದರಿಂದ ಜನತೆ ಇದನ್ನು
ಅರಿತುಕೊಂಡು ಲಾಕ್ಡೌನ್ಗೆ ಸಹಕರಿಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.ಪೊಲೀಸರು
ಮನೆಯಿಂದ ಹೊರಗೆ ಬಂದು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಮನೆಗೆ ಹೋದ ನಂತರ
ಕುಟುಂಬಸ್ಥರಿಂದ ದೂರವೇ ಉಳಿಯುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಸಂಚಾರ ವಿಭಾಗದ ಜಂಟಿ
ಪೊಲೀಸ್ ಆಯುಕ್ತ ರವಿಕಾಂತೇಗೌಡ ಬಹಿರಂಗಪಡಿಸಿದ್ದಾರೆ.ದಯವಿಟ್ಟು ಮನೆಯಿಂದ ಹೊರಬರದೆ ನಮಗೆ ಸಹಕರಿಸಿ ಎಂದು ವಿನಂತಿಸಿಕೊಂಡಿದ್ದಾರೆ.ನಿಮ್ಮ
ಸುರಕ್ಷತೆಗಾಗಿ ನಮ್ಮ ತಂದೆ ತಾಯಿ ಹೊರಗೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನೆಗೆ ಬಂದಾಗಲೂ ನಾನು ಅವರ ಸಮೀಪ ನಮಗೆ ತೆರಳಲು ಆಗುತ್ತಿಲ್ಲ. ದಯವಿಟ್ಟು ಮನೆಯಲ್ಲೇ
ಇದ್ದು ಸಹಕರಿಸಿ ಎಂದು ಪೊಲೀಸರ ಮಕ್ಕಳು ಸಾರ್ವಜನಿಕರಲ್ಲಿ ಮನವಿ ಮಾಡುವ
ಸಂದೇಶವೊಂದನ್ನು ಅವರು ಹಂಚಿಕೊಂಡಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 