ಬೀಜ, ರಸಗೊಬ್ಬರ ಪರಿಕರ ಮಾರಾಟಕ್ಕೆ ಅವಕಾಶ

ಹಾವೇರಿ:ಎ. 05:   ಕೃಷಿ ಚಟುವಟಿಕೆಗೆ ಪೂರಕವಾದ ಬೀಜ, ರಸಗೊಬ್ಬರ, ಕೀಟನಾಶಕ ಪರಿಕರ ಮಾರಾಟಗಾರರು ತಮ್ಮ ಖರೀದಿ ಕೇಂದ್ರಗಳನ್ನು ತೆರೆದು ಪರಿಕರಗಳನ್ನು ರೈತರಿಗೆ  ವಿತರಣೆ ಮಾಡಿಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಕೃಷಿ ಯಂತ್ರೋಪಕರಣ ಕೇಂದ್ರಗಳನ್ನು ತೆರೆದು ರೈತರಿಗೆ ಪಿವಿಸಿ ಪೈಪ್ಗಳನ್ನು ಮಾರಾಟ ಹಾಗೂ ವಿತರಣೆಗೆ ಹಸಿರು ಪಾಸ್ ನೀಡಲಾಗುತ್ತಿದೆ. ಟ್ರ್ಯಾಕ್ಟರ್ ರಿಪೇರಿ, ಸವರ್ಿಸ್ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸಲು ಸಕರ್ಾರ ಅನುಮತಿ ನೀಡಿದೆ. ರೈತರು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಸ್ಥಳೀಯ, ಹೊರ ಜಿಲ್ಲೆ, ಹೊರ ರಾಜ್ಯ ಮಾರುಕಟ್ಟೆಗೆ  ಕಳುಹಿಸಲು ತಾಲೂಕಿನ ಸಹಾಯಕ ಕೃಷಿ ನಿದರ್ೆಶಕರು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೆಶಕರು ಪಾಸ್ ನೀಡಲು ತಿಳಿಸಲಾಗಿದೆ.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಹಾಗೂ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. 

 ಬೀಜೋತ್ಪಾದನಾ ಕೇಂದ್ರಗಳು ರೈತರ ಮೂಲಕ ಬೀಜೋತ್ಪಾದನೆಯನ್ನು ಕೈಗೊಂಡಿರುವ ತಾಕುಗಳೀಗೆ ಭೇಟಿ ನೀಡಿ ಕ್ಷೇತ್ರ ಪರಿಶೀಲನೆ, ಬೀಜ ಖರೀದಿ, ಸಂಸ್ಕರಣೆ ಪ್ಯಾಕಿಂಗ್ ವಿತರಣೆ ಮತ್ತು ಸಾಗಾಣಿಕೆ ಮಾಡಲು ಕೋವಿಡ್ -19 ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಮಾಡಲು ಅನುಕೂಲಮಾಡಿಕೊಡಲಾಗಿದೆ. ಇದರೊಂದಿಗೆ ರೈತರು ತಮ್ಮ  ಜಮೀನಿನಲ್ಲಿ ತಾವಗಾಲಿ ಅಥವಾ ಇತರೆ ಕೃಷಿ ಕಾಮರ್ಿಕರನ್ನು ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷತಾ ಕ್ರಮಗಳಾದ ಮುಖಟವನ್ನು ಧರಿಸಿ ಹ್ಯಾಂಡ್ ಸ್ಯಾನಿಟೈಸರ್ ಬಳಸಿಕೊಂಡು ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ