ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ"
One-day workshop and exhibition on agricultural product marketing for farmer producer organizations
ಹುಬ್ಬಳ್ಳಿ 27: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ, ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯ, ಹುಬ್ಬಳ್ಳಿ ಹಾಗೂ ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯ, ಭಾರತ ಸರ್ಕಾರ ಉಪ ಕಚೇರಿ ಹುಬ್ಬಳ್ಳಿ*ಇವರ ಸಹಯೋಗದಲ್ಲಿ "ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ" ವನ್ನು ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯ ಹುಬ್ಬಳ್ಳಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಡಾ.ರಂಜಿತ್ ಕುಮಾರಿ್ಪ.ಎಸ್ , ಮಾರಾಟ ಅಧಿಕಾರಿಗಳು, ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯ ಹುಬ್ಬಳ್ಳಿ ಪ್ರಸ್ತಾವಿಕ ಭಾಷಣ ಮಾಡುವದರೊಂದಿಗೆ ಕಾರ್ಯಗಾರದ ಪ್ರಾಮುಖ್ಯತೆ ಯನ್ನು ತಿಳಿಸಿದರು, ಮುಂದುವರೆದು ಡಾ.ಗೋವಿಂದ ರೆಡ್ಡಿ, ಡೆಪ್ಯುಟಿ ಮಾರ್ಕೆಟಿಂಗ್ ಅಡ್ವೈಸರ್, ಮಾರಾಟ ಮತ್ತು ತಪಾಸಣಾ ನಿರ್ದೇಶನಾಲಯದ ಭಾರತ ಸರಕಾರದ ಯೋಜನೆಗಳು,
ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಕೇಂದ್ರ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು, ಡಾ.ಕೆ. ಕೊಡಿಗೌಡ, ಹೆಚ್ಚುವರಿ ನಿರ್ದೇಶಕರು, ಕಾನೂನು ಜಾರಿಕೋಶ, ಹುಬ್ಬಳ್ಳಿ ವಿಭಾಗ ಕೃಷಿ ಮಾರಾಟ ಇಲಾಖೆ ಇವರು ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ಇರುವ ಉಪಯೋಗಗಳ ಬಗ್ಗೆ ತಿಳಿಸದರು, *ಶ್ರೀ. ಗೌರಿಶಂಕರ್ ಕರೋಶಿ, ಪ್ರಗತಿ ಪರ ರೈತರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳು, ಇವರು ಸಾವಯವ ಕೃಷಿ, ಮೌಲ್ಯ ವರ್ಧನೆ ಹಾಗೂ ಮಾರುಕಟ್ಟೆಯ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು*, ಆಶಿಕ್ ಅಲಿ. ಡಿ.ಎಮ್ ಪ್ರಾಚಾರ್ಯರು, ಕೃಷಿ ಮಾರಾಟ ಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುವದರೊಂದಿಗೆ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು, ಶ್ರೀ ರಾಘವೇಂದ್ರ ಮುರಗೋಡ, ಹಿರಿಯ ಮಾರಾಟ ಅಧಿಕಾರಿಗಳು ಇವರು ಅಗ್ಮಾರ್ಕ್ ಸರ್ಟಿಫಿಕೇಷನ್ ಬಗ್ಗೆ ತಿಳಿಸುವದರೊಂದಿಗೆ ರೈತ ಉತ್ಪಾದಕ ಸಂಸ್ಥೆಗಳ ವಸ್ತು ಪ್ರದರ್ಶನವನ್ನು ಆಯೋಜಿಸಿ ಅದರ ಉಸ್ತುವಾರಿಯನ್ನು ವಹಿಸಿದರು, ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 