ಭಕ್ತರ ಸಹಕಾರದಿಂದ ಮಠಗಳು ಬೆಳೆಯಲು ಸಾಧ್ಯ: ಶ್ರೀಗಳು
Mutts can grow with the cooperation of devotees: Seer
ರಾಯಬಾಗ 13: ಭಕ್ತರ ಸಹಾಯ ಸಹಕಾರದಿಂದ ಮಠಗಳು ಬೆಳೆಯಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಭೆಂಡವಾಡ ಗ್ರಾಮದ (ಗುಡ್ಡದ) ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಮನೆ-ಮನಗಳಲ್ಲಿ ಭಕ್ತಿಯನ್ನು ಹೊಂದಬೇಕೆಂದರು.
ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಮಹಾರಾಜರು ಮಾತನಾಡಿ, ರೇವಣಸಿದ್ಧೇಶ್ವರ ನಡೆದಾಡಿದ ಭೂಮಿ ಪೂಣ್ಯ ಭೂಮಿಯಾಗಿ ಅಭಿವೃದ್ಧಿ ಹೊಂದಿದೆ. ಮನುಷ್ಯನ ದೇಹ ಮತ್ತು ಆತ್ಮಕ್ಕೆ ಕೊಂಡಿ ಆಗಿರುವ ಮನಸ್ಸನ್ನು ಗೆಲ್ಲಲು ಶಿವಧ್ಯಾನ ಮಾಡಬೇಕೆಂದರು.
ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಪ್ರಭಾ ಹೊಸಮಠದ ವಿರುಪಾಕ್ಷ ಸ್ವಾಮೀಜಿ, ಮಾರುತಿ ಶರಣರು, ಹಿರಿಯ ಧುರೀಣ ಅನೀಲ ದಳವಾಯಿ, ವಕೀಲರಾದ ವಿ.ಎಸ್.ಪೂಜೇರಿ, ರೇವಣು ಶಿವಾಪೂರೆ, ಸುರೇಶ ಚೌಗುಲೆ, ಮಹಾದೇವ ಲಕ್ಷ್ಮೇಶ್ವರ, ರೇವಣು ದುಪದಾಳೆ, ಸಿದ್ದು ಪಾತ್ರೋಟ, ಸಂಜು ಹಂಜಿ, ಸಂಗಪ್ಪ ಬೆನ್ನಾಳೆ, ಸಿದ್ದಗೌಡ ಕಬಾಡಗಿ ಸೇರಿ ಅನೇಕ ಭಕ್ತಾದಿಗಳು ಇದ್ದರು.
ರವಿ ಪೂಜೇರಿ ಸ್ವಾಗತಿಸಿ, ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 