ಪುಣ್ಯಸ್ಮರಣೋತ್ಸವ ನಿಮಿತ್ಯ ಸಂಗೀತ ಕಾರ್ಯಕ್ರಮ

ಬೆಳಗಾವಿ 28:  ಗಾನಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಮತ್ತು ಪದ್ಮಭೂಷಣ ಲಿಂ.ಪಂ. ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಸಂಗೀತ ಕಾರ್ಯಕ್ರಮ  ದಿನಾಲು 26ರಂದು ಗೊಂಗಡ ಶೆಟ್ಟರ್  ನಿವಾಸದಲ್ಲಿ ಜರುಗಿತು.

ಈ   ನಿಮಿತ್ತ  ಕಾರಂಜಿ ಮಠದ  ಕುಮಾರೇಶ್ವರ ವಿದ್ಯಾರ್ಥಿನಿಯರಿಂದ ಸಂಗೀತ ಕಾರ್ಯಕ್ರಮ ಸಡಗರದಿಂದ ಜರುಗಿತು.

ಸಾನಿಧ್ಯ ವಹಿಸಿದ್ದ ಪ್ರವಚನಕಾರ ಶ್ರೀ ಮೃತ್ಯುಂಜಯ ಸ್ವಾಮಿಗಳು ಆಶೀರ್ವಚನ ನೀಡಿದರು  ಗಣ್ಯರಾದ ಬಾಳಪ್ಪ ರಾಯಣ್ಣವರ್  ಅಧ್ಯಕ್ಷತೆ ವಹಿಸಿದರು.   ಸಂಗೀತ ಸೇವೆಯಲ್ಲಿ ಸಹನಾ ಪಟಗುಂದಿ,  ಲತೀಕಾ ಜಗಜಂಪಿ,  ಲಾವಣ್ಯ ಜಗಜಂಪಿ,  ವಿನೋದ್, ಚಿನ್ನಪ್ಪ ಗೌಡರ್,  ಚೈತ್ರ ಪುರಾಣಿಕ ಮಠ  ಇವರು ಭಾಗವಹಿಸಿದ್ದರು.  ಶರಣಪ್ಪ ಗೊಂಗಡ್ ಶೆಟ್ಟರ್,   ವಿನಾಯಕ  ಮುತಗೆಕರ  ಇವರು ತಬಲಾ ಸಾತ್ ನೀಡಿದರು.  ಶಂಕರ ಬೇವಿನಗಿಡದ  ಹಾರ್ಮೋನಿಯಂ ನುಡಿಸಿದರು. 

ಹಿರಿಯ ತಬಲವಾದಕ   ಶಂಕರ ಮುತಗೇಕರ  ಸೇರಿದಂತೆ ಅನೇಕ ಸಾಧಕರನ್ನು ಸತ್ಕರಿಸಲಾಯಿತು.  ಮುಖ್ಯ ಅತಿಥಿಗಳಾಗಿ  ಬಿ .ಎಚ್. ಮಾರದ,  ಸಿದ್ದಪ್ಪ ಪೂಜಾರಿ  ಆಗಮಿಸಿದ್ದರು. 

ಕಾರ್ಯಕ್ರಮದಲ್ಲಿ  ನಿರುಪಾದಯ್ಯ  ಕಲ್ಲೋಳಿ ಮಠ,  ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ,  ರಾಜಕುಮಾರ ಮ್ಯಾಗೋಟಿ,  ಗೋಪಾಲ ಖಟಾವಕರ  ಸೇರಿದಂತೆ ಅನೇಕರು ಭಾಗವಹಿಸಿದ್ದರು.