ಹಿರಿಯ ನಾಗರಿಕರಿಗಾಗಿ ಸಂಗೀತ ಕಾರ್ಯಕ್ರಮ
Music program for senior citizens
ಹಿರಿಯ ನಾಗರಿಕರಿಗಾಗಿ ಸಂಗೀತ ಕಾರ್ಯಕ್ರಮ
ಬೆಳಗಾವಿ 25: ಇಳಿವಯಸ್ಸಿನಲ್ಲಿ ಸಂಗೀತ, ಸಾಹಿತ್ಯ, ಚಿತ್ರಕಲೆ ಹೀಗೆ ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹವ್ಯಾಸ ಮುಪ್ಪನ್ನು ಮರೆಯಿಸುತ್ತದೆ ಅಲ್ಲದೇ ನನಗೆ ವಯಸ್ಸಾಗಿದೆ ಎಂಬ ಭಾವನೆಯಿಂದ ಹೊರ ತರುತ್ತದೆ ಎಂದು ಸ್ವರಾಂಜಲಿ ಸ್ಥಾಪಕ ಚಂದ್ರಶೇಖರ ಹಿರೇಮಠ ಹೇಳಿದರು.
ಹಿಂದವಾಡಿಯಲ್ಲಿರುವ ಸ್ವರಾಂಜಲಿ ಕರೋಕೆ ಕ್ಲಬ್ ಸಂಘಟನೆಯವರು ಇದೇ ದಿ. 22 ರವಿವಾರದಂದು ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ ಕರೋಕೆ ಹಾಡುಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಂದ್ರಶೇಖರ ಕೌಜಲಗಿಯವರು ನವಿರಾದ ಹಾಸ್ಯ ಚಟಾಕೆಗಳೊಂದಿಗೆ ಜನರನ್ನು ರಂಜಿಸಿದರು. ಜಿ. ಎಸ್. ಸೋನಾರ್ ಮಿಮಿಕ್ರಿ ಮಾಡಿದರು. 1960-70 ನೇ ಇಸ್ವಿಯಲ್ಲಿ ತೆರೆ ಕಂಡಿರುವ ಚಲನಚಿತ್ರಗಳ ಹಾಡುಗಳನ್ನು ಕಲಾವಿದರಾದ ಕಿರಣ ಕುಲಕರ್ಣಿ, ಅನ್ವರ ಝರಿ, ಗಜಾನನ ರತನ, ಗಜಾನನ ಕರ್ೆ, ಛಾಯಾ ಕರ್ೆ, ಸುನಿಲ ಧರ್ಮಾಧಿಕಾರಿ, ಎಸ್ ವಿ. ನಾಯಿಕ, ಚಂದ್ರಶೇಖರ ಕೌಜಲಗಿ, ಹರಿ ಸುತಾರ ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿದರು.
ಪ್ರಭಾಕರ ಕೊಲ್ಹಾರ, ಪಾಂಡರಂಗ, ಕದಮ, ಚಂದ್ರಕಾಂತ ಅಪ್ಪಣ್ಣವರ, ಗುಂಡೇನಟ್ಟಿ ಮಧುಕರ, ಚಂದ್ರಶೇಖರ ಕೆ. ಹಿರೇಮಠ ಸಂಗೀತಾಸಕ್ತರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 