‘ಜನತಾ ಬಜಾರ್’ಗೆ ಮುಹೂರ್ತ
ಬೆಂಗಳೂರು, ಫೆ 08, ಎಂವಿ ಸಿನಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸುತ್ತಿರುವ ‘ಜನತಾ ಬಜಾರ್’ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ. ನೂತನ ಚಿತ್ರಕ್ಕೆ ಕೆ ಎಂ ಮುರಳಿ ಬಂಡವಾಳ ಹೂಡಿದ್ದು, ಪ್ರದೀಪ್ ಆರ್ ಜೆ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಕಿರಣ ಅಣ್ಣಿಗೇರಿ ಸಂಭಾಷಣೆ, ರಾಜೇಶ್ ಗೌಡ ಛಾಯಾಗ್ರಹಣವಿದ್ದು, ವೈಭವ್ ಸಂಗೀತ ಸಂಯೋಜಿಸಿದ್ದಾರೆ ಸುಪ್ರೀತಾ ಸಂತೋಷ್, ಅಂಜನ್ ಕುಮಾರ್, ಶಿವರಾಜ್ ಸಾಹಿತ್ಯವಿದೆ
ಚಿತ್ರದ ಸಾರಾಂಶ:- ತಾಯಿಯೊಬ್ಬಳಿಗೆ ಸದ್ಗುಣಿಗಳಾದ ಇಬ್ಬರು ಗಂಡುಮಕ್ಕಳಿದ್ದು, ಎಲ್ಲರಿಗೂ ನೆರವು ನೀಡುತ್ತ, ಊರಿನಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾರೆ ಹೀಗಿರುವಾಗ ಅನಿರೀಕ್ಷಿತ ಘಟನೆಯೊಂದು ಅವರ ಜೀವನದಲ್ಲಿ ಸಂಕಷ್ಟಕ್ಕೆ ಕಾರಣವಾಗುತ್ತದೆ ಅದರಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ತಿರುಳು ಎಂದು ನಿರ್ಮಾಪಕರು ತಿಳಿಸಿದ್ದಾರೆ ತಾರಾಗಣದಲ್ಲಿ ರಾಹುಲ್ ಅರ್ಜುನ್(ಹೊಸ ಪರಿಚಯ), ಕುಮಾರ್, ಅದಿತಿ, ಅಶ್ವಿತ, ಸಹ ಕಲಾವಿದರುಗಳಾಗಿ, ವಿನಯ್, ರಘು, ಪ್ರಜ್ವಲ್, ಕಿರಣ್, ಪವನ್ ಮೊದಲಾದವರಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 