ಮುದ್ದೇಬಿಹಾಳ: ಲೈನಮನ್ ವರ್ತನೆ ಆಕ್ಷೇಪ ಕ್ರಮಕ್ಕೆ ಜನತೆ ಮನವಿ
ಲೋಕದರ್ಶನ ವರದಿ
ಮುದ್ದೇಬಿಹಾಳ 14: ತಮ್ಮ ತಾಂಡಾದಲ್ಲಿ ಮಾದಕ ದ್ರವ್ಯ ಹಾಗೂ ಗಾಂಜಾ ಸೇವಿಸಿ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಾನೆ, ಹೊಡೆಯುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಾನೆ ಎಂದು ದೂರಿ ಗ್ರಾಮದ ನೀತಿನ್ ಭೀಮಸಿಂಗ್ ನಾಯಕ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನೂರಾರು ಗ್ರಾಮಸ್ಥರು ಸ್ಥಳೀಯ ಹೆಸ್ಕಾಮ್ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಮಾದಕ ದ್ರವ್ಯ ಸೇವನೆ, ಗ್ರಾಮದ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ತರಿಸುತ್ತಾನೆ. ಅವರಿಗೆ ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯ ಮಾಡುತ್ತಾನೆ, ನಿರಾಕರಿಸಿದವನಿಗೆ ಬೆದರಿಕೆ ಹಾಕುತ್ತಾನೆ. ಗ್ರಾಮದ ಹೆಣ್ಣು ಮಕ್ಕಳ ಸುರಕ್ಷತೆ ಸಮಸ್ಯೆಯಾಗಿದೆ. ಹೆಣ್ಣು ಮಕ್ಕಳು ಮನೆಯಂಗಳದಲ್ಲಿ ಕುಳಿತುಕೊಳ್ಳದಂತೆ, ಬಹಿರ್ದೆಸೆಗೆ ಹೋಗಲೂ ಹೆದರುವಂತಾಗಿದೆ. ಎಂದು ಹೇಳಲಾಗಿದೆ.
ಮನವಿಗೆ ಪ್ರೇಮಸಿಂಗ ಚವ್ಹಾಣ, ಎಸ್.ಎಂ.ಮೇಲಿನಮನಿ, ಸಿ.ಎನ್.ರಾಠೋಡ, ವಿ.ಬಿ.ರಾಠೋಡ, ಬಿ.ಎಚ್.ಚವ್ಹಾಣ, ಎಸ್.ಜೆ.ಚವ್ಹಾಣ, ಎಸ್.ಜಿ.ಚವ್ಹಾಣ, ಪಿ.ಎಸ್.ಚವ್ಹಾಣ, ಕವಿತಾ ಚವ್ಹಾಣ, ಅಶ್ವಿನಿ ರಾಠೋಡ, ಜ್ಯೋತಿ ಚವ್ಹಾಣ, ಸ್ನೇಹಾ ಪವಾರ, ಸಂತೋಷ ಚವ್ಹಾಣ ಮತ್ತಿತರರು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನ ಗ್ರಾಮಸ್ಥರು ಸಹಿ ಮಾಡಿದ್ದಾರೆ. ಮನವಿಯನ್ನು ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರಾದ ಎಸ್.ಎಸ್.ಪಾಟೀಲರಿಗೆ ಸಲ್ಲಿಸಲಾಯಿತು. ಈ ಕುರಿತು ಇಲಾಖೆಗೆ ವರದಿ ನೀಡಲಾಗುವುದು ಎಂದು ಎಸ್.ಎಸ್.ಪಾಟೀಲರು ತಿಳಿಸಿದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 