ಕೋವಿಡ್-19 ಹೋರಾಟಕ್ಕೆ ಚೆಸ್ ಆಟಗಾರರಿಂದ ಹಣ ಸಂಗ್ರಹ
ಮುಂಬಯಿ/ ಚೆನ್ನೈ, ಏ 8,ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕ್ರೀಡಾ ವಲಯದಿಂದ ಅಭೂತಪೂರ್ವ ಬೆಂಬಲ ಮುಂದುವರಿದಿದೆ. ಗ್ರ್ಯಾಂಡ್ ಮಾಸ್ಟರ್ ಪಿ. ಹರಿಕೃಷ್ಣ ಒಳಗೊಂಡಂತೆ ದೇಶದ ಚೆಸ್ ಆಟಗಾರರು ತಮ್ಮ ಕೊಡುಗೆಯಾಗಿ 3 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸುವ ಮೂಲಕ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ತಮ್ಮ ಕೈಲಾದಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಕೆಲವು ಯುವ ಚೆಸ್ ಆಟಗಾರರು ಆನ್ ಲೈನ್ ಟೂರ್ನಿಗಳನ್ನು ಸಂಘಟಿಸುವ ಮೂಲಕ 1.05 ಲಕ್ಷ ರೂ. ಸಂಗ್ರಹಿಸಿದರೆ, ಖ್ಯಾತ ತರಬೇತುದಾರ ಆರ್.ಬಿ. ರಮೇಶ್ ತಮ್ಮ ಚೆಸ್ ಗುರುಕುಲ್ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ಈ ಗುರುಕುಲಕ್ಕೆ ಪಿ. ಹರಿಕೃಷ್ಣ 2 ಲಕ್ಷ ರೂ. ನೀಡಿದರೆ, ಕಾರ್ತಿಕೇಯನ್ ಮುರಳಿ 25 ಸಾವಿರ ರೂ. ನೀಡಿದ್ದಾರೆ. ಒಬ್ಬರು ಗ್ರ್ಯಾಂಡ್ ಮಾಸ್ಟರ್, ಏಳು ಅಂತಾರಾಷ್ಟ್ರೀಯ ಮಾಸ್ಟರ್ಸ್ , ಅನೇಕ ರಾಷ್ಟ್ರೀಯ ಚೆಸ್ ಚಾಂಪಿಯನ್ ಮತ್ತು ಉತ್ಸಾಹಿಗಳು ಒಗ್ಗೂಡಿ ದಿ ಚೆಸ್ಟರ್ ಗ್ರೂಪ್ ನ ಆಶ್ರಯದಲ್ಲಿ ಆನ್ ಲೈನ್ ಟೂರ್ನಿಯನ್ನು ಮಂಗಳವಾರ ಆಯೋಜಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸುಮಾರು 80 ಚೆಸ್ ಆಟಗಾರರು ಮತ್ತು ಉತ್ಸಾಹಿಗಳು ಪಿಎಂ-ಕೇರ್ಸ್ ನಿಧಿಗೆ 1.05 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಏತನ್ಮಧ್ಯೆ ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧದ ಹೋರಾಟಕ್ಕೆ ಹಾಕಿ ಇಂಡಿಯಾ ಬುಧವಾರ ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 21 ಲಕ್ಷ ರೂಪಾಯಿ ನೆರವು ನೀಡಿದೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 