ಕೋವಿಡ್-19 ಹೋರಾಟಕ್ಕೆ ಚೆಸ್ ಆಟಗಾರರಿಂದ ಹಣ ಸಂಗ್ರಹ
ಮುಂಬಯಿ/ ಚೆನ್ನೈ, ಏ 8,ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕ್ರೀಡಾ ವಲಯದಿಂದ ಅಭೂತಪೂರ್ವ ಬೆಂಬಲ ಮುಂದುವರಿದಿದೆ. ಗ್ರ್ಯಾಂಡ್ ಮಾಸ್ಟರ್ ಪಿ. ಹರಿಕೃಷ್ಣ ಒಳಗೊಂಡಂತೆ ದೇಶದ ಚೆಸ್ ಆಟಗಾರರು ತಮ್ಮ ಕೊಡುಗೆಯಾಗಿ 3 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸುವ ಮೂಲಕ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ತಮ್ಮ ಕೈಲಾದಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಕೆಲವು ಯುವ ಚೆಸ್ ಆಟಗಾರರು ಆನ್ ಲೈನ್ ಟೂರ್ನಿಗಳನ್ನು ಸಂಘಟಿಸುವ ಮೂಲಕ 1.05 ಲಕ್ಷ ರೂ. ಸಂಗ್ರಹಿಸಿದರೆ, ಖ್ಯಾತ ತರಬೇತುದಾರ ಆರ್.ಬಿ. ರಮೇಶ್ ತಮ್ಮ ಚೆಸ್ ಗುರುಕುಲ್ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ಈ ಗುರುಕುಲಕ್ಕೆ ಪಿ. ಹರಿಕೃಷ್ಣ 2 ಲಕ್ಷ ರೂ. ನೀಡಿದರೆ, ಕಾರ್ತಿಕೇಯನ್ ಮುರಳಿ 25 ಸಾವಿರ ರೂ. ನೀಡಿದ್ದಾರೆ. ಒಬ್ಬರು ಗ್ರ್ಯಾಂಡ್ ಮಾಸ್ಟರ್, ಏಳು ಅಂತಾರಾಷ್ಟ್ರೀಯ ಮಾಸ್ಟರ್ಸ್ , ಅನೇಕ ರಾಷ್ಟ್ರೀಯ ಚೆಸ್ ಚಾಂಪಿಯನ್ ಮತ್ತು ಉತ್ಸಾಹಿಗಳು ಒಗ್ಗೂಡಿ ದಿ ಚೆಸ್ಟರ್ ಗ್ರೂಪ್ ನ ಆಶ್ರಯದಲ್ಲಿ ಆನ್ ಲೈನ್ ಟೂರ್ನಿಯನ್ನು ಮಂಗಳವಾರ ಆಯೋಜಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸುಮಾರು 80 ಚೆಸ್ ಆಟಗಾರರು ಮತ್ತು ಉತ್ಸಾಹಿಗಳು ಪಿಎಂ-ಕೇರ್ಸ್ ನಿಧಿಗೆ 1.05 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಏತನ್ಮಧ್ಯೆ ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧದ ಹೋರಾಟಕ್ಕೆ ಹಾಕಿ ಇಂಡಿಯಾ ಬುಧವಾರ ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 21 ಲಕ್ಷ ರೂಪಾಯಿ ನೆರವು ನೀಡಿದೆ.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 