ಆರ್ಬಿಐ ಕ್ರಮಗಳಿಂದ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಪ್ರಯೋಜನಕರ-ಪ್ರಧಾನಿ ಮೋದಿ
ನವದೆಹಲಿ,
ಮಾರ್ಚ್ 27 ,ರೆಪೊ ದರ ಕಡಿತ, ಸಾಲಗಳ ಇಎಂಐ ಪಾವತಿ ಮುಂದೂಡಿಕೆ ಮತ್ತು ಹಣ
ಪ್ರಸರಣ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ನಿರ್ಧಾರವನ್ನು
ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಕ್ರಮಗಳು ಮಾರುಕಟ್ಟೆಯಲ್ಲಿ ಹಣ
ಪ್ರಸರಣವನ್ನು ಹೆಚ್ಚಿಸುವುದಲ್ಲದೆ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ
ನೆರವಾಗಲಿವೆ ಎಂದು ಹೇಳಿದ್ದಾರೆ. ಕರೋನವೈರಸ್ ಪರಿಣಾಮದಿಂದ ದೇಶದ ಆರ್ಥಿಕತೆ
ಕಾಪಾಡಲು ಆರ್ಬಿಐ ದಿಟ್ಟ ಮತ್ತು ಮಹಾ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳಿಂದ ಹಣ
ಪ್ರಸರಣ ಸುಧಾರಿಸುತ್ತದೆಯಲ್ಲದೆ ನಿಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ,
ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಟ್ವೀಟ್
ಮಾಡಿದ್ದಾರೆ.ಕೊವಿದ್ -19 ನಿಂದ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ
ಆರ್ಬಿಐ ಶುಕ್ರವಾರ ಹಲವಾರು ಕ್ರಮಗಳನ್ನು ಪ್ರಕಟಿಸಿದೆ.ರೆಪೊ ದರವನ್ನು 75 ಮೂಲಾಂಕ
ತಗ್ಗಿಸಿ ಶೇ 4.4 ಕ್ಕೆ ಇಳಿಸಿರುವುದು ಇವುಗಳಲ್ಲಿ ಪ್ರಮುಖವಾಗಿದೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 