ಆರ್ಬಿಐ ಕ್ರಮಗಳಿಂದ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಪ್ರಯೋಜನಕರ-ಪ್ರಧಾನಿ ಮೋದಿ
ನವದೆಹಲಿ,
ಮಾರ್ಚ್ 27 ,ರೆಪೊ ದರ ಕಡಿತ, ಸಾಲಗಳ ಇಎಂಐ ಪಾವತಿ ಮುಂದೂಡಿಕೆ ಮತ್ತು ಹಣ
ಪ್ರಸರಣ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ನಿರ್ಧಾರವನ್ನು
ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಕ್ರಮಗಳು ಮಾರುಕಟ್ಟೆಯಲ್ಲಿ ಹಣ
ಪ್ರಸರಣವನ್ನು ಹೆಚ್ಚಿಸುವುದಲ್ಲದೆ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ
ನೆರವಾಗಲಿವೆ ಎಂದು ಹೇಳಿದ್ದಾರೆ. ಕರೋನವೈರಸ್ ಪರಿಣಾಮದಿಂದ ದೇಶದ ಆರ್ಥಿಕತೆ
ಕಾಪಾಡಲು ಆರ್ಬಿಐ ದಿಟ್ಟ ಮತ್ತು ಮಹಾ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳಿಂದ ಹಣ
ಪ್ರಸರಣ ಸುಧಾರಿಸುತ್ತದೆಯಲ್ಲದೆ ನಿಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ,
ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಟ್ವೀಟ್
ಮಾಡಿದ್ದಾರೆ.ಕೊವಿದ್ -19 ನಿಂದ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ
ಆರ್ಬಿಐ ಶುಕ್ರವಾರ ಹಲವಾರು ಕ್ರಮಗಳನ್ನು ಪ್ರಕಟಿಸಿದೆ.ರೆಪೊ ದರವನ್ನು 75 ಮೂಲಾಂಕ
ತಗ್ಗಿಸಿ ಶೇ 4.4 ಕ್ಕೆ ಇಳಿಸಿರುವುದು ಇವುಗಳಲ್ಲಿ ಪ್ರಮುಖವಾಗಿದೆ.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 