ಮುಂದಿನ ವರ್ಷದಿಂದ ಮೋದಿ ಕನಸಿನ ಬುಲೆಟ್ ರೈಲು ಕಾಮಗಾರಿ ಆರಂಭ
ಮುಂಬೈ, ಆ 20 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಯ ಭೂಸ್ವಾಧೀನಕ್ಕೆ ಇದ್ದ ಅಡ್ಡಿ ಆತಂಕಗಳು ಈಗ ನಿವಾರಣೆಯಾಗಿದ್ದು ಮುಂದಿನ ವರ್ಷದ ಮಾರ್ಚ್ - ಏಪ್ರಿಲ್ ನಿಂದ ಕಾಮಗಾರಿ ಪ್ರಾರಂಭವಾಗಿ, 2023 ಕ್ಕೆ ರೈಲು ಸೇವೆಗೆ ಚಾಲನೆ ದೊರಕಲಿದೆ.
ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ನ ಬುಲೆಟ್ ರೈಲು ಯೋಜನೆಗೆ ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ಬಹಳ ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಈಗ ಭೂಸ್ವಾಧೀನದ ಅಡ್ಡಿ ಆತಂಕಗಳು ಬಹುತೇಕ ನಿವಾರಣೆಯಾಗಿದೆ.
ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿಲೋಮೀಟರ್ ಬುಲೆಟ್ ರೈಲು ಕಾಮಗಾರಿ ಮುಂದಿನ ವರ್ಷದ ಮಾರ್ಚ್ - ಏಪ್ರಿಲ್ ನಿಂದ ಆರಂಭವಾಗಿ 2023 ರ ವೇಳೆಗೆ ಕಾಮಗಾರಿ ಸಂಪೂರ್ಣ ಮುಗಿದು ರೈಲು ಸಂಚಾರವೂ ಆರಂಭವಾಗಲಿದೆ.
ಸರ್ಕಾರಿ ಭೂಮಿ 154 ಹೆಕ್ಟೇರ್ ಹಾಗೂ ರೈಲ್ವೆ ಇಲಾಖೆಯಲ್ಲಿನ 127 ಹೆಕ್ಟೇರ್ ಭೂಮಿ ಜೊತೆಗೆ 1ಸಾವಿರದ 379 ಹೆಕ್ಟೇರ್ ಖಾಸಗಿ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬುಲೆಟ್ ರೈಲು ಮಹಾರಾಷ್ಟ್ರದಲ್ಲಿ 155 ಕಿಲೋಮೀಟರ್ ಹಾಗೂ ಗುಜಾರಾತ್ ನಲ್ಲಿ 350 ಕಿಲೋಮೀಟರ್ ದೂರ ಹಾದು ಹೋಗಲಿದೆ.
ಮುಂಬೈ ಮತ್ತು ಅಹಮದಾಬಾದ್ ನಡುವೆ ಒಟ್ಟು 12 ರೈಲು ನಿಲ್ದಾಣಗಳು ಬರಲಿವೆ. ಈ ಮೊದಲು ನಿಗದಿಯಾಗಿದ್ದಂತೆ 2022 ರ ವೇಳೆಗೆ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳುವ ವೇಳೆಗೆ ದೇಶದ ಮೊದಲ ಬುಲೆಟ್ ರೈಲು ಮುಂಬೈ - ಅಹಮದಾಬಾದ್ ನಡುವೆ ಸಂಚಾರ ಮಾಡಬೇಕು ಎಂಬುದು ಮೋದಿ ಅವರ ಮಹಾನ್ ಕನಸಾಗಿತ್ತು. ಆದರೆ ಭೂಸ್ವಾಧೀನದ ಅಡ್ಡಿ ಆತಂಕಗಳಿಂದಾಗಿ ಈಗ ಯೋಜನೆ ಜಾರಿ ಒಂದು ವರ್ಷ ತಡವಾಗಲಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷದಿಂದ ಕಾಮಗಾರಿ ಆರಂಭವಾಗಿ 2023 ರ ಕೊನೆಯ ವೇಳೆಗೆ ಮುಗಿಯಲಿದ್ದು ಅದೇ ವರ್ಷದ ಕೊನೆ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಒಂದು ಲಕ್ಷ ಕೋಟಿ ರೂ ಬಜೆಟ್ ನ ಬುಲೆಟ್ ರೈಲು ಸಂಚಾರ ಮಾಡಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 